ಕಡಬ : ತಮ್ಮನಿಂದ ಅಣ್ಣನ ಕೊಲೆಯತ್ನ | ತಮ್ಮನಿಂದ ಅಣ್ಣನ ಮೇಲೆ ತಲ್ವಾರ್ ದಾಳಿ

ಕಡಬ : ಕಡಬದ ಇಚ್ಲಂಪಾಡಿಯ ಪದಕದಲ್ಲಿ ಅಣ್ಣನ ಮೇಲೆ ತಮ್ಮನಿಂದ ತಲ್ವಾರ್ ದಾಳಿ ನಡೆದಿದ್ದು,ಗಾಯಗೊಂಡ ಅಣ್ಣ ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮರಳು ವ್ಯವಹಾರದಲ್ಲಿ ಗುರುತಿಸಿಕೊಂಡಿರುವ ಪ್ರಭಾಕರ ಎಂಬಾತ ಅಣ್ಣ ಲಕ್ಷ್ಮಣ ಎಂಬವರ ಮೇಲೆ ತಲ್ವಾರ್ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಲಕ್ಷ್ಮಣ ಗೌಡ ಅವರು ಶ್ರೀ ಧರ್ಮಸ್ಥಳ ಅನ್ನ ಛತ್ರದಲ್ಲಿ ಅಡುಗೆ ಕೆಲಸಮಾಡಿಕೊಂಡಿದ್ದು ತನ್ನ ತಂದೆಯ ಜಮೀನಿನನ್ನು ತಮ್ಮ ಪ್ರಭಾಕರನು ಪಾಲುಕೊಡದೇ ಇದ್ದು ಜಮೀನಿನ ವಿಚಾರವಾಗಿ ತಮ್ಮ ಪ್ರಭಾಕರನೊಂದಿಗೆ ಆಗಾಗ ತಕರಾರುಗಳಾಗುತ್ತಿದ್ದು ಇದರಿಂದ ಬೇಸತ್ತು ಲಕ್ಷ್ಮಣ ಗೌಡರ ಹೆಂಡತಿ ಅವರ ತವರು ಮನೆಗೆ ಹೋಗಿದ್ದು, ಹಾಗೂ ಲಕ್ಷ್ಮಣ ಗೌಡರ ಮತ್ತೊಬ್ಬ ತಮ್ಮ ಭಾಸ್ಕರನು ಆರೋಪಿ ಪ್ರಭಾಕರನ ಕಿರುಕುಳ ತಾಳಲಾರದೆ ಮನೆ ಸಮೀಪದಲ್ಲಿಯೇ ಬಾಡಿಗೆ ಮನೆಯಲ್ಲಿಯೇ ವಾಸಿಸಿಕೊಂಡಿದ್ದಾರೆ.

ಇವರಿಬ್ಬರೂ ಕೆಲಸದ ಬಿಡುವಿನ ವೇಳೆಯಲ್ಲಿ ಮನೆಗೆ ಬಂದು ಹೋಗುತ್ತಿದ್ದು ಅದರಂತೆ ಆ. 27ರಂದು ರಾತ್ರಿ ಮನೆಗೆ ಬಂದಾಗ ಭಾಸ್ಕರನು ಮನೆಯ ಒಳಗಿನಿಂದ ಮನೆ ಸಾಮಾಗ್ರಿಗಳನ್ನು ತೆಗೆದುಕೊಂಡು ಬರಲು ಮನೆಯ ಒಳಗೆ ಹೋಗುತ್ತಿದ್ದಾಗ ಮನೆಯ ಅಂಗಳದಲ್ಲಿ ಜೀಪಿನ ಬಳಿ ನಿಂತುಕೊಂಡಿದ್ದ ಆರೋಪಿ ಪ್ರಭಾಕರನು ಜೀಪಿನಿಂದ ತಲವಾರನ್ನು ತೆಗೆದುಕೊಂಡು ಬಂದು ಭಾಸ್ಕರನಿಗೆ ಕಡಿಯಲೆಂದು ಹೋದಾಗ ಅಣ್ಣ ಲಕ್ಷ್ಮಣ ಗೌಡರು ತಡೆದಾಗ ಪ್ರಭಾಕರನು ಕುತ್ತಿಗೆಯ ಕಡೆಗೆ ತಲವಾರು ಬೀಸಿದಾಗ ಬಗ್ಗಿ ತಪ್ಪಿಸಿಕೊಂಡಿದ್ದು ಪುನ: ಪ್ರಭಾಕರನು ಕಡಿಯಲು ಪ್ರಯತ್ನಿಸಿದಾಗ ಬಲ ಕೈಯನ್ನು ಅಡ್ಡ ಹಿಡಿದಾಗ ತಲವಾರು ಬಲ ಮುಂಗೈಗೆ ತಾಗಿ ಗಂಭೀರ ಗಾಯವಾಗಿದ್ದು,ನಂತರ ಆರೋಪಿ ಪ್ರಭಾಕರನು ತಲವಾರನ್ನು ತೆಗೆದುಕೊಂಡು ಹೋಗುತ್ತಾ ನಿಮ್ಮನ್ನು ಕಡಿದು ಹೊಳೆಗೆ ಬಿಸಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಗಾಯಾಳು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದು ನಂತರ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಈ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.