ಕರಾಯ : ಎರಡು ತಂಡಗಳ ನಡುವೆ ಮಾರಾಮಾರಿ | ಇತ್ತಂಡಗಳಿಂದ ದೂರು

ಉಪ್ಪಿನಂಗಡಿ : ಕರಾಯ ಗ್ರಾಮದ ಕಣ್ಣೀರಿ ಜಂಕ್ಷನ್‌ನಲ್ಲಿ ಆ. 24ರಂದು ರಾತ್ರಿ ತಂಡಗಳೆರಡರ ಮಧ್ಯೆ ಮಾತಿನ ಚಕಮಕಿ ನಡೆದು ಇತ್ತಂಡದವರು ಪರಸ್ಪರ ಹೊಡೆದಾಟ ನಡೆಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ಕ್ಷುಲ್ಲಕ ಕಾರಣದಿಂದ ಅಶ್ರಫ್ ಹಾಗೂ ಗಫಾರ್ ಎಂಬಿಬ್ಬರ ಗುಂಪುಗಳ ನಡುವೆ ಹೊಡೆದಾಟ ನಡೆದು ಅಶ್ರಫ್ ಮೇಲೆ ೮ ಮಂದಿಯ ತಂಡ ಹಲ್ಲೆ ನಡೆಸಿದೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಇದೇ ಪ್ರಕರಣದಲ್ಲಿ ಗಲ್ಡರ್ ಮೇಲೆ 12ಮಂದಿಯ ತಂಡ ಹಲ್ಲೆ ನಡೆಸಿದೆ ಎಂದೂ ಪೊಲೀಸರಿಗೆ ದೂರು ನೀಡಲಾಗಿದೆ. ಉಪ್ಪಿನಂಗಡಿ ಪೊಲೀಸರಿಂದ ತನಿಖೆ ನಡೆಯುತ್ತಿದೆ.

Leave A Reply

Your email address will not be published.