ಚಿನ್ನದಂಗಡಿ ದರೋಡೆ ಮಾಡಿದ ದರೋಡೆಕೋರರಿಂದ ಗುಂಡು ಹಾರಾಟ | ಅಮಾಯಕ ಯುವಕ ಬಲಿ

ಚಿನ್ನಾಭರಣ ಕಳವು ಮಾಡಲು ಚಿನ್ನದಂಗಡಿಗೆ ಬಂದ ದರೋಡೆಕೋರರು ಹಾರಿಸಿದ ಗುಂಡಿಗೆ ಅಮಾಯಕ ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ಸೋಮವಾರ ನಡೆದಿದೆ.

ಘಟನೆಯಲ್ಲಿ ಮೈಸೂರಿನ ದಡದಹಳ್ಳಿ ಗ್ರಾಮದ ಚಂದ್ರು (23) ಎಂಬ ಅಮಾಯಕ ಯುವಕ ದರೋಡೆಕೋರರ ಗುಂಡೇಟಿಗೆ ಬಲಿಯಾದ ದುರ್ದೈವಿ ಯುವಕ.

ಮೈಸೂರಿನ ವಿದ್ಯಾರಣ್ಯಪುರಂ ಚಿನ್ನಾಭರಣ ಮಳಿಗೆಯೊಂದಕ್ಕೆ ಸೋಮವಾರ ಸಾಯಂಕಾಲ ಚಿನ್ನ ಖರೀದಿಸುವಂತೆ ಬಂದ ಖದೀಮರು, ಏಕಾಏಕಿ ಅಂಗಡಿ ಮಾಲೀಕನಿಗೆ ಪಿಸ್ತೂಲ್ ತೋರಿಸಿ ಬೆದರಿಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ.

ಈ ವೇಳೆ ಪ್ರತಿರೋಧ ತೋರಲು ಅಂಗಡಿ ಮಾಲೀಕ ಮುಂದಾದಾಗ ಚಿನ್ನಾಭರಣ ಅಂಗಡಿಯಿಂದ ಹೊರಬಂದು ದರೋಡೆಕೋರರು ಹಾರಿಸಿದ್ದ ಗುಂಡು ರಸ್ತೆಯಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಗುಂಡು ತಗುಲಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

Leave A Reply

Your email address will not be published.