ಮಂಗಳೂರಿನ ಅನಾಥ ಮಾನಸಿಕ ಅಸ್ವಸ್ಥನಿಗೆ ಮೂಡಿಗೆರೆಯಲ್ಲಿ ದೊರಕಿತು ರಕ್ಷಣೆ

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಣಕಲ್ ನ ಜನಿತ್ ಕಾಂಪ್ಲೆಕ್ಸ್ ನಲ್ಲಿದ್ದ ಮಂಗಳೂರಿನ ಅನಾಥ ವ್ಯಕ್ತಿಯನ್ನು ಸಮಾಜ ಸೇವಕರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ನಡೆದಿದೆ.

ಅನಾಥ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥರಾಗಿದ್ದು, ಇವರು ಮಂಗಳೂರು ಸಮೀಪದ ಕುಲಶೇಖರ ನಿವಾಸಿ ಎಂದು ಪ್ರಾಥಮಿಕ ಮಾಹಿತಿ ದೊರಕಿದೆ.

ಸಮಾಜಸೇವಕ ಆರಿಫ್, ಪೊಲೀಸ್ ಕಾನ್ಸ್ಟೇಬಲ್ ಜಗದೀಶ್ ,ಕಾಂಪ್ಲೆಕ್ಸ್ ನ ಮಾಲೀಕ ಶರೀಫ್ ಹಾಗೂ ಸ್ಥಳೀಯರಾದ ದಿಲೀಪ್, ನಫೀಸ್ , ಹರೀಶ್ ಸೇರಿ ವ್ಯಕ್ತಿಯನ್ನು ಎಂಜಿಎಂ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಡುವಲ್ಲಿ ನೆರವಾಗಿದ್ದಾರೆ.

Leave A Reply

Your email address will not be published.