ಉದ್ಯಾವರದ ಜಯಲಕ್ಷ್ಮೀ ವಸ್ತ್ರ ಮಳಿಗೆಯ ಸಂಸ್ಥಾಪಕಿ ಗೀತಾ ವಿ.ಹೆಗ್ಡೆ ನಿಧನ

ಉಡುಪಿಯ ಪ್ರಸಿದ್ಧ ಜವುಳಿ ಅಂಗಡಿ, ಉದ್ಯಾವರದ ಜಯಲಕ್ಷ್ಮೀ ಸಿಲ್ಕ್ಸ್ ಮಳಿಗೆಯ ಸಂಸ್ಥಾಪಕಿ ಗೀತಾ ವಿ. ಹೆಗ್ಡೆ (70 ) ಅವರು ಉದ್ಯಾವರ ಗುಡ್ಡೆಯಂಗಡಿಯ ತನ್ನ ಸ್ವಗೃಹದಲ್ಲಿ ಇಂದು ನಿಧನರಾಗಿದ್ದಾರೆ.

52 ವರ್ಷಗಳ ಹಿಂದೆ ಉದ್ಯಾವರದಲ್ಲಿ ಪತಿ ಎನ್. ವಾಸುದೇವ ಹೆಗ್ಡೆ ಜೊತೆಯಲ್ಲಿ ಜಯಲಕ್ಷ್ಮೀ ವಸ್ತ್ರ ಮಳಿಗೆ ಸ್ಥಾಪಿಸಿದ್ದರು. ಇದೀಗ ಈ ಮಳಿಗೆ ರಾಜ್ಯಾದ್ಯಂತ ಜನಪ್ರಿಯಗೊಂಡಿದೆ.

ಮೃತರು ಉದ್ಯಾವರ ಜಯಲಕ್ಷ್ಮೀ ಜವುಳಿ ಮಳಿಗೆ ಮಾಲಕರಾದ ಪುತ್ರರಾದ ವೀರೇಂದ್ರ ಹೆಗ್ಡೆ ಮತ್ತು ರವೀಂದ್ರ ಹೆಗ್ಡೆ , ಪುತ್ರಿ ವೀಣಾ ಹೆಗ್ಡೆ ಅವರನ್ನು ಅಗಲಿದ್ದಾರೆ.

Leave A Reply

Your email address will not be published.