ಮಂಗಳೂರು: ಸುರತ್ಕಲ್ ನಿಂದ ಮಂಗಳಾದೇವಿ ಕಡೆ ಚಲಿಸುತ್ತಿದ್ದ 15 ನಂಬರಿನ ಶ್ರೀ ದೇವಿ ಪ್ರಸಾದ್ ಹೆಸರಿನ ಖಾಸಗಿ ಬಸ್ಸಿನ ಮೇಲೆ ಮಲ್ಲಿಕಟ್ಟ ಸರ್ಕಲ್ ಬಳಿ ತೆಂಗಿನ ಮರ ತುಂಡಾಗಿ ಬಿದ್ದ ಘಟನೆ ಮಂಗಳವಾರ ನಡೆದಿದೆ.
ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆ ಸಂಭವಿಸಿಲ್ಲ ಎಂದು ಬಸ್ಸಿನ ಮಾಲಕ ಯಶ್ ಅವರು ಮಾಹಿತಿ ನೀಡಿದ್ದಾರೆ.