ಆಸ್ತಿಯ ದುರಾಸೆಗಾಗಿ ತನ್ನ ಸಹೋದರರ ಜೊತೆಗೂಡಿ ಪತ್ನಿಯನ್ನೇ ಕೊಂದ ಪತಿ

ಆಸ್ತಿ ಹಂಚಿಕೆ ವಿವಾದದಿಂದ ಸಹೋದರರ ಜೊತೆಗೂಡಿ, ಪತಿ ತನ್ನ ಪತ್ನಿಯನ್ನೇ ಕೊಂದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಇಂದು ನಡೆದಿದೆ.

ರಹಮಾನ್ ಈ ಹತ್ಯೆಯ ಪ್ರಮುಖ ಆರೋಪಿ. ರೇಷ್ಮಾ ರಹಮಾನ್ ತಾಸೆವಾಲೆ ಮೃತಪಟ್ಟ ಮಹಿಳೆ.

ಆಸ್ತಿಯ ಪಾಲಿನ ವಿಚಾರವಾಗಿ ಆರಂಭವಾದ ವಾದ-ವಿವಾದಗಳಿಂದ ತನ್ನ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಗಲಾಟೆ ಹೆಚ್ಚಾಗುತ್ತಾ ಕೊನೆಗೆ ಅದು ಕೊಲೆಯ ಮೂಲಕ ಅಂತ್ಯ ಕಂಡಿದೆ. ರಹಮಾನ್ ರಾಡ್‌ನಿಂದ ಹೊಡೆದು ರೇಷ್ಮಾಳನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಮೃತಳ ಪತಿ ರಹಮಾನ್ ಸೇರಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

Leave A Reply

Your email address will not be published.