ಮಂಗಳೂರು | ಖೈದಿಗೆ ಅನಾನಸು ಹಣ್ಣಿನೊಳಗೆ ಗಾಂಜಾ ಪೂರೈಕೆಗೆ ಯತ್ನ, ಆರೋಪಿ ಅಂದರ್

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿರುವ ಖೈದಿಯೋರ್ವನಿಗೆ ಅನನಾಸು ಹೆಣ್ಣಿನೊಳಗೆ ಗಾಂಜಾ ಪೂರೈಕೆ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಅಬ್ದುಲ್ ಮಜೀದ್ ಎಂಬಾತನೇ ವಿಚಾರಣಾಧೀನ ಖೈದಿಗೆ ಗಾಂಜಾ ನೀಡಲು ಯತ್ನಿಸಿದ ಆರೋಪಿ ಎಂದು ತಿಳಿದುಬಂದಿದೆ.

ಅಬ್ದುಲ್ ಮಜೀದ್ ಕಾರಾಗೃಹದಲ್ಲಿದ್ದ ರಾಜಪ್ಪ ಎಂಬಾತನಿಗೆ ಅಗತ್ಯ ವಸ್ತುಗಳನ್ನು ನೀಡಲು ಬಂದಿದ್ದ. ಈ ವಸ್ತುಗಳನ್ನು ಭದ್ರತಾ ಸಿಬ್ಬಂದಿ ತಪಾಸಣೆ ಮಾಡುತ್ತಿದ್ದ ವೇಳೆ, ಎಕ್ಸ್‌ರೇ ಬ್ಯಾಗೇಜ್‌ನಲ್ಲಿ ಅನಾನಸು ಹಣ್ಣಿನ ಒಳಗೆ ಯಾವುದೋ ವಸ್ತು ಇರುವುದು ಪತ್ತೆಯಾಗಿದೆ.

ಕೂಡಲೇ ಹಣ್ಣನ್ನು ತುಂಡರಿಸಿ ನೋಡಿದಾಗ, ಹಣ್ಣಿನೊಳಗೆ ಸಣ್ಣ ಪ್ಯಾಕೇಟ್ ಒಳಗಡೆ ಗಾಂಜಾದಂತೆ ತೋರುವ ವಸ್ತು ಪತ್ತೆಯಾಗಿದೆ. ತಕ್ಷಣ ಆರೋಪಿ ಅಬ್ದುಲ್ ಮಜೀದ್‌ನನ್ನು ಬರ್ಕೆ ಪೊಲೀಸರಿಗೆ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.