ಸವಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದಿಂದ ಪಾಲ್ತಾಡಿ ಗ್ರಾಮದ ಚೆನ್ನಾವರ ಗಡಿಗುತ್ತು ಶ್ರೀ ಉಳ್ಳಾಕುಲು ಮಾಡ ಗ್ರಾಮ ದೈವ ಅಬ್ಬೆಜಲಾಯ ಮತ್ತು ಪರಿವಾರ ದೈವಗಳ ಜೀರ್ಣೋದ್ಧಾರಕ್ಕೆ 1,00,000 ರೂ. ಅನುದಾನವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಂಜೂರುಗೊಳಿಸಿದ್ದಾರೆ.
ಈ ಅನುದಾನ ಮೊತ್ತವನ್ನು ದೈವಸ್ಥಾನದಲ್ಲಿ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಆನಂದ್ ಕೆ., ಕೆದಂಬಾಡಿ ವಲಯದ ಮೇಲ್ವಿಚಾರಕಿ ಶ್ರುತಿ, ಉಳ್ಳಾಕುಲು ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಬ್ರಾಯ ಗೌಡ ಪಾಲ್ತಾಡಿ, ಉಪಾಧ್ಯಕ್ಷರಾದ ಮೋನಪ್ಪ ಗೌಡ ಪಟ್ಲ, ಸಿ.ಎಂ ಪುಟ್ಟಣ ,ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಜೈನ್, ಜೆತೆ ಕಾರ್ಯದರ್ಶಿಗಳಾದ ಕೃಷ್ಣಪ್ಪ ಚೆನ್ನಾವರ, ನಂದಕುಮಾರ, ಸದಸ್ಯರಾದ ಗೋಪಾಲದಾಸ್ ಚೆನ್ನಾವರ, ಮಂಜಪ್ಪರೈ, ದೇವಪ್ಪ, ನಿತೇಶ್ ಮಡಿವಾಳ, ಚಂದ್ರಶೇಖರ ರೈ ನೆಲ್ಯಾಜೆ, ಹುಕ್ರಪ್ಪ ನಾಯ್ಕ, ಹೊನ್ನಪ್ಪ ನಾಯ್ಕ ಬೇರಿಕೆ ಉಪಸ್ಥಿತರಿದ್ದರು.
Praveen Chennavara Palthady village & post Kadaba Taluq D.K.-For contact- 7090806456