ಕಾರ್ಕಳ | ಮಂಗ ಓಡಿಸಲು ಕೋವಿ ಹಿಡಿದು ಓಡಿದಾಗ ಎಡವಿ ಬಿದ್ದು ಸಿಡಿದ ಗುಂಡು, ಕಿವಿಯನ್ನು ಸೀಳಿಕೊಂಡು ಹೋದ ಗುಂಡು

ಕೋವಿಯಿಂದ ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಕುಕ್ಕುಜೆ ಎಂಬಲ್ಲಿ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಕರುಣಾಕರ್ ಎಂದು ಗುರುತಿಸಲಾಗಿದೆ.

ಇಂದು ಬೆಳಿಗ್ಗೆ ಸಂಜೀವ ಪೂಜಾರಿ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕರುಣಾಕರ್, ತೋಟದಲ್ಲಿದ್ದ ಮಂಗನನ್ನು ಓಡಿಸುವ ಸಲುವಾಗಿ ಕೋವಿ ಹಿಡಿದು ಹೊರಟಿದ್ದರು. ಆ ವೇಳೆ ಕಾಲಿಗೆ ಕಲ್ಲು ತಾಗಿ ಎಡವಿದ್ದು, ಕೈಯಲ್ಲಿದ್ದ ಕೋವಿಯಿಂದ ಗುಂಡು ಹಾರಿದೆ. ಹಾಗಾಗಿ ಅವರ ಕಿವಿ ಭಾಗಕ್ಕೆ ಬಲವಾದ ಗಾಯವಾಗಿದೆ ಎಂದು ತಿಳಿದುಬಂದಿದೆ.

ಕರುಣಾಕರ್ ಅವರನ್ನು ಈಗಾಗಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜೆಕಾರು ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.