ಸವಣೂರು: ದಲಿತ ಮುಖಂಡ ಶಿವಪ್ಪ ಅಟ್ಟೋಳೆ ನಿಧನ

ಸವಣೂರು : ಉಳ್ಳಾಲ ನಗರಸಭೆಯ ಸಿಬ್ಬಂದಿಯಾಗಿದ್ದ ಸವಣೂರಿನ ಅಟ್ಟೋಳೆ ನಿವಾಸಿ ಶಿವಪ್ಪ ಅಟ್ಟೋಳೆ(50ವ.)ರವರು ಜು.23ರಂದು ಸಂಜೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯ ಪೀಡಿತರಾಗಿ ಸುಮಾರು ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಅಲ್ಲಿ ನಿಧನರಾಗಿದ್ದಾರೆ .ಮೃತರು ಪತ್ನಿ ಗೌರಿ,ಇಬ್ಬರು ಪುತ್ರಿಯರು, ಮಾಜಿ ಸೈನಿಕರಾಗಿರುವ ಸಹೋದರ ಶಿವಪ್ರಕಾಶ್ ಸೇರಿದಂತೆ ಮೂವರು ಸಹೋದರರು, ಸಹೋದರಿಯನ್ನು ಅಗಲಿದ್ದಾರೆ.

ಈ ಹಿಂದೆ ಪುತ್ತೂರು ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸಿ ಬಳಿಕ ಉಳ್ಳಾಲ ನಗರಸಭೆಗೆ ವರ್ಗಾವಣೆಗೊಂಡಿದ್ದರು. ಈ ನಡುವೆ ಅವರು ದಕ್ಷಿಣ ಕನ್ನಡ ಜಿಲ್ಲಾ ಬಹುಜನ ಸಮಾಜ ಪರಿವರ್ತನ ವೇದಿಕೆಯ ಉಸ್ತುವಾರಿಯಾಗಿದ್ದರು. .ಅಲ್ಲದೆ ದಲಿತ ಮುಖಂಡರಾಗಿ ಗುರುತಿಸಿಕೊಂಡು ಪುತ್ತೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಪುತ್ತೂರಿನಲ್ಲಿ ಅಹಿಂದ ಕಾರ್ಯದರ್ಶಿಯಾಗಿದ್ದರು.

Leave A Reply

Your email address will not be published.