ಸವಣೂರು : ಕೆರೆಗೆ ಬಿದ್ದು ಯುವಕ ಸಾವು

ಸವಣೂರು : ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಸವಣೂರು ಗ್ರಾಮದ ಕಂಪ ಎಂಬಲ್ಲಿ ಯುವಕನೋರ್ವ ಕೆರೆಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.

ಕುದ್ಮಾರು ಗ್ರಾಮದ ಕುಂಞ ಎಂಬವರ ಮಗ ನವೀನ್ (27 ವ.) ಎಂಬಾತನೇ ಮೃತಪಟ್ಟ ಯುವಕ.ನವೀನ್ ಸವಣೂರು ಗ್ರಾಮದ ಕಂಪ ಎಂಬಲ್ಲಿ ಪ್ರವೀಣ್
ನಾಯಕ್ ಎಂಬವರ ಮನೆಯಲ್ಲಿ ಕೆಲಸ ಮಾಡುತ್ತಿದ್ದು,ಜು.23ರಂದು ಬೆಳಿಗ್ಗೆ ಕೆಲಸಕ್ಕೆಂದು ಹೋಗಿದ್ದು ರಾತ್ರಿಯಾದರೂ ಮನೆಗೆ ಬಾರದಿದ್ದರಿಂದ ಹುಡುಕಾಟ ನಡೆಸಿದಾಗ ಜು.24ರಂದು ಪ್ರವೀಣ್ ನಾಯಕ್ ರವರ ತೋಟದ ಮಧ್ಯೆ ಇರುವ ಕೆರೆಯಲ್ಲಿ ನವೀನ್ ಧರಿಸುವ
ಚಪ್ಪಲಿ ಕಂಡುಬಂದಿದ್ದು ಬಳಿಕ ಅಗ್ನಿಶಾಮಕದಳದವರನ್ನು ಕರೆಸಿ ಹುಡುಕಾಟ ನಡೆಸಿದಾಗ ನೀರಿನಾಳದಲ್ಲಿ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.