ಬೆಳ್ತಂಗಡಿ, ಕೊಕ್ಕಡ | ಉಡುಪಿ ಸಮೀಪ ನಡೆದ ಅಪಘಾತಕ್ಕೆ ಕೊಕ್ಕಡ ನಿವಾಸಿ ಸದಾನಂದ ಕಿಣಿ ಸಾವು

ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಯುವಕನೊಬ್ಬ ಉಡುಪಿಯ ಕುಂದಾಪುರದಲ್ಲಿ ನಡೆದ ಅಪಘಾತದಲ್ಲಿ ಮೃತರಾಗಿದ್ದಾರೆ.

ಇಲ್ಲಿನ ಕೊಕ್ಕಡದ ಹಳ್ಳಿಂಗೇರಿ ನಿವಾಸಿಯಾಗಿರುವ ಸದಾನಂದ ಕಿಣಿ ಯಾನೆ ಬಾಬು ಕಿಣಿ ಎಂಬ ಯುವಕನೇ ಮೃತ ಯುವಕ.
ವೃತ್ತಿಯಲ್ಲಿ ವೆಲ್ಡಿಂಗ್ ಮತ್ತಿತರ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ.

ಸದಾನಂದ ಕಿಣಿ ತಮ್ಮ ಸಹೋದರ ಲಾರಿ ಚಾಲಕ ಕೃಷ್ಣಾನಂದ ಕಿಣಿಯವರೊಂದಿಗೆ ಕಾರ್ಯ ನಿಮಿತ್ತ ಕುಂದಾಪುರಕ್ಕೆ ತೆರಳಿದ್ದನು. ಕುಂದಾಪುರದ ತ್ರಾಸಿ ಎಂಬಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗಳಾಗಿತ್ತು.

ಕೂಡಲೇ ಇವನನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

ಯುವಕನು ಮೂಲತಃ ಕೊಕ್ಕಡದ ಅಳ್ಳಿಂಗೇರಿಯಲ್ಲಿ ತನ್ನ ತಾಯಿಯ ಜೊತೆ ವಾಸವಾಗಿದ್ದ. ಕೆಲಸಮಯ ತನ್ನ ಅಣ್ಣನ ಜೊತೆ ಉಪ್ಪಿನಂಗಡಿಯಲ್ಲಿ ಕೂಡ ನೆಲೆಸಿದ್ದ.

ಇದೀಗ ಮೃತದೇಹವು ಕುಂದಾಪುರದಲ್ಲಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Leave A Reply

Your email address will not be published.