ಬೆಳ್ತಂಗಡಿ | ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ದನದ ರಕ್ಷಣೆ ಮಾಡಿದ ಯುವಕರು

ನದಿಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ದನವೊಂದನ್ನು ಯುವಕರ ತಂಡವೊಂದು ರಕ್ಷಣೆ ಮಾಡಿದ ಘಟನೆ
ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ.

ದನವು ವೇಣೂರಿನ ಜಯರಾಮ್ ಶೆಟ್ಟಿ ಎಂಬವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಫಲ್ಗುಣಿ ನದಿಯ ನೀರಿನ ರಭಸಕ್ಕೆ ದನವು ಕೊಚ್ಚಿ ಹೋಗುವ ಸ್ಥಿತಿಯಲ್ಲಿತ್ತು.

ಈ ವೇಳೆ ಇದನ್ನು ಗಮನಿಸಿದ ನುರಿತ ಈಜುಗಾರರಾದ ಇಂತಿಯಾಝ್ ನಡ್ತಿಕಲ್ ಹಾಗು ಹಸನಬ್ಬ ಕೈರೋಳಿ ಎಂಬುವವರು ನದಿಗೆ ಧುಮುಕಿ ದನವನ್ನು ಎಳೆದು ದಡಕ್ಕೆ ತಂದಿದ್ದಾರೆ. ನದಿ ತಟದ ಬಳಿ ಮೇಯಲು ಹೋಗಿದ್ದ ವೇಳೆ ನದಿ ನೀರಿನ ಹರಿವು ಹೆಚ್ಚಾದ ಕಾರಣ ದನ ನದಿಗೆ ಬಿದ್ದಿದೆ ಎನ್ನಲಾಗಿದೆ.

Leave A Reply

Your email address will not be published.