ಮಂಗಳೂರಿನ ಖ್ಯಾತ ಸುಡುಮದ್ದು ಉದ್ಯಮಿ ದಿನೇಶ್ ಭಂಡಾರ್‌ಕಾರ್ ನಿಧನ

ಮಂಗಳೂರು : ಮಂಗಳೂರಿನ ಬಂದರು ಪ್ರದೇಶದಲ್ಲಿ ಸುಡುಮದ್ದು ಹಾಗೂ ಸಿಲ್ಕೋ ಬ್ರಾಂಡಿನ ತೂಕದ ಯಂತ್ರದ ವ್ಯಾಪರ ನಡೆಸುತ್ತಿದ್ದ ನಗರದ ಖ್ಯಾತ ಉದ್ಯಮಿ ಬಿ. ಗಣಪತಿ ಭಂಡಾರ್‌ಕಾರ್ ಮತ್ತು ಸನ್ಸ್ ಸಂಸ್ಥೆಯ ಪಾಲುದಾರರಾದ ದಿನೇಶ್ ಭಂಡಾರ್‌ಕಾರ್ (61) ಅವರು ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ರಾತ್ರಿ ನಿಧನರಾಗಿದ್ದಾರೆ.

ಫಳ್ನೀರ್ ನಿವಾಸಿಯಾಗಿದ್ದ ಇವರು ಬಂದರು ವ್ಯಾಪ್ತಿಯಲ್ಲಿ ಹಾಗೂ ತಮ್ಮ ಆಪ್ತರ ವಲಯದಲ್ಲಿ ಮಂಜಣ್ಣ ಎಂದೇ ಹೆಸರುವಾಸಿಯಾಗಿದ್ದರು. ನಗರದ ವಿವಿಧ ಸಂಘ-ಸಂಸ್ಥೆಗಳಿಗೆ, ದೈವಸ್ಥಾನ, ದೇವಸ್ಥಾಗಳಿಗೆ ನೆರವು ನೀಡುವ ಮೂಲಕ ಹಾಗೂ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಿಗಿಸಿಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ತಮ್ಮ ತಂದೆಯ ಪಟಾಕಿ ಮಾರಾಟ ಉದ್ಯಮದಲ್ಲಿ ತಮ್ಮ 17ನೆ ವಯಸ್ಸಿನಿಂದಲೇ ಇವರು ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave A Reply

Your email address will not be published.