ಬೆಳ್ತಂಗಡಿ, ಧರ್ಮಸ್ಥಳ | ಚಿಕ್ಕ ಪ್ರಾಯದ ವಿವಾಹಿತ ಯುವಕ ಹೃದಯಾಘಾತಕ್ಕೆ ಬಲಿ

ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ನಾರ್ಯ ಎಂಬಲ್ಲಿ ಚಿಕ್ಕ ಪ್ರಾಯದ ಯುವಕನೊಬ್ಬ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ವೃತ್ತಿಯಲ್ಲಿ ಉಪ್ಪಿನಂಗಡಿಯಲ್ಲಿ ಶಾಲೆಯೊಂದರಲ್ಲಿ ಕ್ಲಾರ್ಕ್ ಆಗಿದ್ದ, ಕೇವಲ  ಸದಾನಂದ ಅವರು ಇತ್ತೀಚೆಗೆ ಲಾಕ್ಡೌನ್ ನಿಮಿತ್ತ ಕೆಲಸವಿಲ್ಲದೆ ತಮ್ಮ ಮನೆಯಲ್ಲಿಯೇ ಇದ್ದರು. ಮನೆಯಲ್ಲಿದ್ದು ಅಕ್ಕ ಪಕ್ಕದ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇಂದು ಹಾಗೆಯೇ ಸುದೆಮಾರ್ ಎಂಬಲ್ಲಿ ಕೈತೋಟದ ಕೆಲಸಮಾಡುತ್ತಿರುವಾಗ ಹಾಗೆಯೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಮೃತರಿಗೆ ಮದುವೆಯಾಗಿದ್ದು ಇದೀಗ ಪತ್ನಿ ಗರ್ಭಿಣಿಯಾಗಿದ್ದು ಪತ್ನಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಮತ್ತು ತಂಡ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಇದೀಗ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Leave A Reply

Your email address will not be published.