ಬೆಂಗಳೂರಿನಲ್ಲಿ ಹಾಡು ಹಗಲೇ ತಲ್ವಾರ್ ಬೀಸಿದ ಸದ್ದು | ಬ್ಯಾಂಕಿನ ಒಳಗೆ ನುಗ್ಗಿ ರೌಡಿಶೀಟರ್ ಬಬ್ಲಿಯ ಡೆಡ್ಲಿ ಹತ್ಯೆ | ಪತ್ನಿಯ ಎದುರೇ ನಡೆದುಹೋದ ಮರ್ಡರ್ !!

ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ತಲವಾರ್ ಝಳಪಿಸಲಾಗಿದ್ದು, ಬ್ಯಾಂಕ್ ಒಳಗೆ ನುಗ್ಗಿ ರೌಡಿಶೀಟರ್ ಒಬ್ಬನನ್ನು ಹತ್ಯೆ ಮಾಡಲಾಗಿದೆ.

ಬೆಂಗಳೂರಿನ ಕೋರಮಂಗಲದಲ್ಲಿರುವ ಯೂನಿಯನ್ ಬ್ಯಾಂಕ್ ಗೆ ನುಗ್ಗಿದ ಆಗಂತುಕರು ಬ್ಯಾಂಕಿನ ಒಳಗಿದ್ದ ಬಬ್ಲಿ ಎಂಬಾತನನ್ನು ಬರ್ಬರವಾಗಿ ಹತ್ಯೆಮಾಡಿದ್ದಾರೆ.

ಹಳೆ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ. ರೌಡಿಶೀಟರ್ ಬಬ್ಲಿ ಯು ತನ್ನ ಪತ್ನಿಯೊಂದಿಗೆ ಬ್ಯಾಂಕ್ ಕೆಲಸಕ್ಕೆಂದು ಬಂದಿದ್ದ. ಆತ ಯೂನಿಯನ್ ಬ್ಯಾಂಕಿನ ಒಳಗೆ ಬ್ಯಾಂಕ್ ಕೆಲಸದಲ್ಲಿ ನಿರತನಾಗಿದ್ದಾಗ ಈ ದಾಳಿ ನಡೆದಿದೆ.

ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿದ್ದಾರೆ.

Leave A Reply

Your email address will not be published.