ಪಾಲ್ತಾಡಿ : ಬಿಲ್ಲವ ಗ್ರಾಮ ಸಮಿತಿ ಮಹಾಸಭೆ | ನೂತನ ಅಧ್ಯಕ್ಷರಾಗಿ ಗುರುಕಿರಣ್ , ಕಾರ್ಯದರ್ಶಿಗಳಾಗಿ ವಾರಿಜಾ, ಯತೀಶ್ ಪಲ್ಲತ್ತಡ್ಕ ಆಯ್ಕೆ

ಸವಣೂರು : ಬಿಲ್ಲವ ಗ್ರಾಮ ಸಮಿತಿ ಪಾಲ್ತಾಡಿ ಇದರ ಮಹಾಸಭೆ ಗ್ರಾಮ ಸಮಿತಿ ಅಧ್ಯಕ್ಷ ಕರುಣಾಕರ ಸಾಲ್ಯಾನ್ ಕಲ್ಲಕಟ್ಟ ಅವರ ಅಧ್ಯಕ್ಷತೆಯಲ್ಲಿ ವಿಜಯ ಕುಮಾರ್ ಹಸಂತಡ್ಕ ಅವರ ಮನೆಯಲ್ಲಿ ನಡೆಯಿತು.

ಪುತ್ತೂರು ಬಿಲ್ಲವ ಸಂಘದ ಜತೆ ಕಾರ್ಯದರ್ಶಿ ಜಯಂತ ಪೂಜಾರಿ ಕೆಂಗುಡೇಲು,ವಲಯ ಸಂಚಾಲಕರಾದ ಕೋಚಣ್ಣ ಪೂಜಾರಿ ಎಂಡೆಸಾಗು,ಸವಣೂರು ಗ್ರಾ.ಪಂ.ಸದಸ್ಯ ತಾರಾನಾಥ ಬಂಗೇರ ಬೊಳಿಯಾಲ ಉಪಸ್ಥಿತರಿದ್ದರು.

ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಗುರುಕಿರಣ್ ಬೊಳಿಯಾಲ, ಪ್ರಧಾನ ಕಾರ್ಯದರ್ಶಿಯಾಗಿ ವಾರಿಜಾ ಯತೀಶ್ ಪಲ್ಲತ್ತಡ್ಕ,ಉಪಾಧ್ಯಕ್ಷ ಮೋಹನ್ ದಾಸ್ ಮುರ್ಕೆತ್ತಿ, ಜತೆ ಕಾರ್ಯದರ್ಶಿಯಾಗಿ ಸುನೀಲ್ ನೇರೋಳ್ತಡ್ಕ ,ಕೋಶಾಧಿಕಾರಿಯಾಗಿ ಕರುಣಾಕರ ಸಾಲ್ಯಾನ್ ಕಲ್ಲಕಟ್ಟ ಹಾಗೂ ಮಹಿಳಾ ಗ್ರಾಮ ಸಮಿತಿ ಅಧ್ಯಕ್ಷೆಯಾಗಿ ಯಶೋದ ವಿಜಯ ಹಸಂತಡ್ಕ,ಉಪಾಧ್ಯಕ್ಷರಾಗಿ ಕುಸುಮ ಪೆಲತಡ್ಕ,ಕಾರ್ಯದರ್ಶಿಯಾಗಿ ವೀಣಾ ಬೊಳಿಯಾಲ, ಜತೆ ಕಾರ್ಯದರ್ಶಿಯಾಗಿ ರಮಣಿ ಅಂಕತ್ತಡ್ಕ, ಕೋಶಾಧಿಕಾರಿಯಾಗಿ ಕಮಲಾಕ್ಷಿ ಕಲ್ಲಕಟ್ಟ ಅವರನ್ನು ಆಯ್ಕೆ ಮಾಡಲಾಯಿತು.

Leave A Reply

Your email address will not be published.