ಹಿರಿಯ ಪತ್ರಕರ್ತ, ಹಾಯ್ ಬೆಂಗಳೂರ್ ಪತ್ರಿಕೆಯ ಕ್ರೈಮ್ ರಿಪೋರ್ಟರ್ ಸುನಿಲ್ ಹೆಗ್ಗರವಲ್ಲಿ ಹೃದಯಾಘತಕ್ಕೆ ಬಲಿ

ಚಿಕ್ಕಮಗಳೂರು: ಕೈಂ ವರದಿಗಾರಿಯಲ್ಲಿ ವಿಶೇಷ ಛಾಪು ಮೂಡಿಸಿದ್ದ, ಹಾಯ್ ಬೆಂಗಳೂರ್ ಪತ್ರಿಕೆಯ ಮಾಜಿ ಕ್ರೈಮ್ ವರದಿಗಾರ ಸುನೀಲ್ ಹೆಗ್ಗರವಳ್ಳಿ ಅವರು (43) ಹೃದಯಾಘಾತದಿಂದ ಇಂದು  ಸಂಜೆ ನಿಧರಾಗಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯ ಸುನೀಲ್ ಅವರು ಈ ಹಿಂದೆ ರವಿ ಬೆಳಗೆರೆಯ ಅಪ್ರ ಶಿಷ್ಯ. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸುನಿಲ್ ಹಲವಾರು ಸ್ಪೋಟಕ ತನಿಖಾ ವರದಿ ಪ್ರಕಟಿಸಿದ್ದರು. ಹಾಯ್ ಪತ್ರಿಕೆಯ ಜತೆಗೆ ದಶಕಗಳಿಂದಲೂ ಅಧಿಕ ಸಮಯ ಕೆಲಸಮಾಡಿದರು. ಪತ್ರಿಕೆ ಜತೆಗೆ ತಾವೂ ಬೆಳೆದಿದ್ದರು.

ಮೂರು ವರ್ಷಗಳ ಹಿಂದೆ ರವಿ ಬೆಳಗೆರೆ ಮತ್ತು ಸುನೀಲ್ ಹೆಗ್ಗರವಳ್ಳಿ ನಡುವೆ ವೈಯಕ್ತಿಕ ವಿಚಾರಕ್ಕೆ ವೈಮನಸ್ಸು ಉಂಟಾಗಿ ಅದು ದೊಡ್ಡ ಸುದ್ದಿಯಾಗಿತ್ತು.
ಸುನೀಲ್ ಕಳೆದ ವರ್ಷ ತಮ್ಮ ಹುಟ್ಟೂರಿ ಹೆಗ್ಗರವಳ್ಳಿಯಲ್ಲಿ ಮನೆ ನಿರ್ಮಿಸಿ, ಬೆಂಗಳೂರಿನಿಂದ ಬಂದು ಅಲ್ಲಿಯೇ ನೆಲೆಸಿದ್ದರು. ಆ ಬಳಿಕ ರಾಷ್ಟ್ರಕೂಟ ನ್ಯೂಸ್ ಎಂಬ ಚಾನೆಲ್ ಹಾಗೂ ಚಾರ್ಲಿ ಟೈಮ್ಸ್ ಎಂಬ ಪತ್ರಿಕೆ ನಡೆಸುತ್ತಿದ್ದರು.

ಇವತ್ತು ಸುನೀಲ್ ಹೆಗ್ಗರವಳ್ಳಿ ಅವರಿಗೆ ಮಧ್ಯಾಹ್ನ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಕೂಡಲೇ ಅವರ ಕುಟುಂಬಸ್ಥರು ಅವರನ್ನು ಗೋಣಿ ಬೀಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಮಾರ್ಗಮಧ್ಯೆ ತೀರಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

Leave A Reply

Your email address will not be published.