ಪುತ್ತೂರು ಟಿಎಚ್‌ಓ ಡಾ.ದೀಪಕ್ ರೈ ನೇಮಕದ ಡಿ.ಸಿ.ಆದೇಶಕ್ಕೆ ಇಲಾಖಾ ಘಟನೋತ್ತರ ಮಂಜೂರಾತಿ

ತಾಲೂಕು ಆರೋಗ್ಯಾಧಿಕಾರಿಯಾಗಿದ್ದ ಡಾ.ಅಶೋಕ್ ಕುಮಾರ್ ರೈ ಅವರು ಕೋವಿಡ್ ಸಮಯದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ತನ್ನ ಅಧಿಕಾರ ಚಲಾಯಿಸಿ ಡಾ.ಅಶೋಕ್ ರೈ ಅವರನ್ನು ಹುದ್ದೆಯಿಂದ ಬದಲಾಯಿಸಿ ಡಾ.ದೀಪಕ್ ರೈ ಅವರನ್ನು ತಾಲೂಕು ಆರೋಗ್ಯಾಧಿಕಾರಿಯಾಗಿ ಆದೇಶಿಸಿದ್ದರು.

ಈ ಆದೇಶ ಪ್ರಶ್ನಿಸಿ ಡಾ.ಅಶೋಕ್ ರೈ ಅವರು ಕೆಎಟಿಗೆ ಮೊರೆ ಹೋಗಿದ್ದು,ಇದೀಗ ಡಾ.ದೀಪಕ್ ರೈ ನೇಮಕದ ಡಿ.ಸಿ.ಆದೇಶಕ್ಕೆ ಇಲಾಖಾ ಘಟನೋತ್ತರ ಮಂಜೂರಾತಿ ದೊರಕಿದ್ದು,ಡಾ.ದೀಪಕ್ ರೈ ಅವರಿಗೆ ಅಧಿಕಾರ ದೊರಕಿದೆ

ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈಯವರಿಗೆ ಟಿಎಚ್‌ಒ ಅಧಿಕಾರವನ್ನು ಡಾ.ಅಶೋಕ್ ರೈ ಅವರು ಹಸ್ತಾಂತರಿಸದ ಕಾರಣ ತಾಂತ್ರಿಕ ಸಮಸ್ಯೆಯಿಂದ ಕಚೇರಿ ಸಿಬ್ಬಂದಿಗಳಿಗೆ ಜೂನ್ ತಿಂಗಳ ವೇತನ ಬಾಕಿಯಾಗಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.