ಕುದ್ಮಾರು : ಅಡಿಕೆ ಗಿಡ ಕಿತ್ತು ದಬ್ಬಾಳಿಕೆ ನಡೆಸಿದ ಗೇರು ನಿಗಮ ಅಧಿಕಾರಿಗಳು

ಕಡಬ ತಾಲೂಕಿನ ಕುದ್ಮಾರು ಗ್ರಾಮದ ಕೆಡೆಂಜಿ ಎಂಬಲ್ಲಿ ಕೃಷಿಕರೋರ್ವರು ನಾಟಿ ಮಾಡಿದ ಅಡಿಕೆಗಳನ್ನು ಗೇರು ನಿಗಮದ ಅಧಿಕಾರಿಗಳು ಕಿತ್ತು ದಬ್ಬಾಳಿಕೆ ನಡೆಸಿದ್ದಾರೆ.

ಕುದ್ಮಾರು ಗ್ರಾಮದ ಕೆಡೆಂಜಿ ಎಂಬಲ್ಲಿ ನಾಗೇಶ್ ಎಂಬವರು ತಮ್ಮ ಜಾಗದ ಪಕ್ಕದಲ್ಲಿರುವ ಭೂಮಿಯನ್ನು ಕಳೆದ ಹಲವಾರು ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿದ್ದು,ಎರಡು ವರ್ಷದ ಹಿಂದೆ ಅಡಿಕೆ ಗಿಡ ನಾಟಿ ಮಾಡಿದ್ದರು.

ಆದರೆ ಗೇರುನಿಗಮದ ಅಧಿಕಾರಿ ಬಾಲಕೃಷ್ಣ ಹಾಗೂ ಸಿಬ್ಬಂದಿಗಳು ನಿಗಮದ ಹೆಸರಲ್ಲಿ ಜಾಗವಿಲ್ಲದಿದ್ದರೂ ಅಕ್ರಮವಾಗಿ ಪ್ರವೇಶಮಾಡಿ ನೆಟ್ಟ ಅಡಿಕೆ ಗಿಡವನ್ನು ಕಿತ್ತು ದಬ್ಬಾಳಿಕೆ ಮಾಡಿದ್ದಾರೆ.ಅಲ್ಲದೆ ಮನೆಯಲ್ಲಿ ಮಹಿಳೆಯರೇ ಇರುವ ಸಮಯದಲ್ಲಿ ಅಕ್ರಮವಾಗಿ ಜಾಗಕ್ಕೆ ಪ್ರವೇಶ ಮಾಡಿ,ಕಷ್ಟ ಪಟ್ಟು ನೆಟ್ಟಿರುವ ಅಡಿಕೆ ಗಿಡಗಳನ್ನು ನಾಶಮಾಡಿದ್ದಾರೆ ಎಂದು ನಾಗೇಶ್ ಕೆಡೆಂಜಿ ತಿಳಿಸಿದ್ದಾರೆ.

Leave A Reply

Your email address will not be published.