ಬಾಲಿವುಡ್ ನಟ ಅಮೀರ್ ಖಾನ್ ಮೇಲೆ ಲವ್ ಜಿಹಾದ್ ಆರೋಪ | 2 ಬಾರಿ ಹಿಂದೂ ಪತ್ನಿಯರಿಗೆ ಮಗು ಕರುಣಿಸಿ ಖಾನ್ ಮಾಡಿದ !!

ಇದೀಗ ‘ಲವ್ ಜಿಹಾದ್’ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ. ನಿನ್ನೆ ನಟ ಅಮೀರ್ ಖಾನ್ ತಮ್ಮ ಪತ್ನಿಗೆ ವಿಚ್ಛೇದನ ಕೊಡುತ್ತಲೇ ಜಾಲತಾಣದ ತುಂಬ ಲವ್ ಜಿಹಾದ್ ನದೇ ಮಾತು.

ಇದಕ್ಕೆ ಕಾರಣ, ಅಮೀರ್ ಖಾನ್ ಇದಾಗಲೇ ಒಬ್ಬ ಹಿಂದೂ ಪತ್ನಿಗೆ ವಿಚ್ಛೇದನ ನೀಡಿದ್ದು, ಈಗ ನಡೆದಿರುವುದು ಎರಡನೆಯ ವಿಚ್ಛೇದನ. ಕೇವಲ 15 ವರ್ಷಗಳ ಅವಧಿಯಲ್ಲಿ ಎರಡು ವಿಚ್ಛೇದನ ಪಡೆದಿದ್ದಾರೆ ಅಮೀರ್. ಈಗ ಕಿರಣ್ ರಾವ್ ಕೂಡ ಹಿಂದೂ. ತಮ್ಮ 15 ವರ್ಷಗಳ ಎರಡನೆಯ ದಾಂಪತ್ಯವನ್ನು ಅಂತ್ಯಗೊಳಿಸುತ್ತಿರುವುದಾಗಿ ನಿನ್ನೆ ಅಮೀರ್ ಖಾನ್ ಮತ್ತು ಕಿರಣ್ ರಾವ್ ಹೇಳಿಕೊಂಡಿದ್ದರು. ಪ್ರತ್ಯೇಕವಾಗಿದ್ದರೂ ಸ್ನೇಹಿತರಾಗಿ ಉಳಿದ ಜೀವನವನ್ನು ಹಂಚಿಕೊಳ್ಳುತ್ತೇವೆ ಎಂದೂ ಹೇಳಿಕೆ ನೀಡಿದ್ದಾರೆ. ಅವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ಡೈವೋರ್ಸ್ ಪಡೆದುಕೊಳ್ಳುತ್ತಿದ್ದರೂ, ಹಿಂದೂ ಸಮಾಜದ ಮೇಲೆ ಒಪ್ಪಿಗೆ ಇದ್ದು ಡೈವೋರ್ಸ್ ಆಗಲಿ, ಇಲ್ಲದೆ ಆಗ, ಅದರ ಪ್ರಭಾವ ಏಕಮುಖವಾದುದು ಎನ್ನುವುದು ಹಲವರ ಅಭಿಪ್ರಾಯ.

ದಾಂಪತ್ಯಕ್ಕೆ ಕೊನೆಹಾಡಲು ಕಾರಣ ಏನೇ ಇರಲಿ, ಆದರೆ ಈ ವಿಚ್ಛೇದನವು ಇದೀಗ ಲವ್ ಜಿಹಾದ್ ರೂಪ ಪಡೆದುಕೊಂಡಿದೆ. ಹಿಂದೆ ಅಸಹಿಷ್ಣುತೆಯ ಮಾತನ್ನಾಡಿದ್ದ ಅಮೀರ್ ಖಾನ್ ಈಗ ಈ ರೀತಿ ಘೋಷಣೆ ಮಾಡಿರುವುದೂ ಆಕ್ರೋಶಕ್ಕೆ ಕಾರಣವಾಗಿದೆ.

ಈಗ ಡೈವೋರ್ಸ್ ಆಗುತ್ತಿರುವ ಕಿರಣ್ ರಾವ್ ಅವರಿಗಿಂತ ಮೊದಲು ಅಮೀರ್, ರೀನಾ ದತ್ತ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಐರಾ ಹಾಗೂ ಜುನೇದ್ ಮಕ್ಕಳಿದ್ದಾರೆ. ಹಿಂದೂ ಪತ್ನಿಗೆ ಎರಡು ಮಕ್ಕಳನ್ನು ಹುಟ್ಟಿಸಿ ಅವರನ್ನು ಖಾನ್ ಮಾಡಿರುವ ಅಮೀರ್, 2002ರಲ್ಲಿ ರೀನಾ ಅವರಿಗೆ ವಿಚ್ಛೇದನ ಕೊಟ್ಟು ಇನ್ನೊಂದು ಹಿಂದೂ ಯುವತಿಯನ್ನು ಮದುವೆಯಾಗಿರುವುದು ಲವ್ ಜಿಹಾದ್‌ ಅಲ್ಲದೆ ಬೇರೆ ಏನೂ ಅಲ್ಲ. ಭಾರತದಲ್ಲಿ ಹೆಚ್ಚು ಹೆಚ್ಚು ಮುಸಲ್ಮಾನರನ್ನು ಸೃಷ್ಟಿಸುವುದು ಅವರ ಉದ್ದೇಶ. ಇದು ಅದರ ಇನ್ನೊಂದು ರೂಪ ಎನ್ನುವುದು ಸೋಶಿಯಲ್ ಮೀಡಿಯಾಗಳ ಅನಿಸಿಕೆ.

ಅಂದಹಾಗೆ ರಾಜಮನೆತನಕ್ಕೆ ಸೇರಿದ ಕಿರಣ್ ರಾವ್ ಅವರನ್ನು ಮದುವೆಯಾದ ಅಮೀರ್ ದಂಪತಿಗೆ ಓರ್ವ ಪುತ್ರನಿದ್ದಾನೆ. ಅವನು ಕೂಡ ಖಾನ್ ಆಗಿದ್ದಾನೆ. ಈಗ ಅಮೀರ್ ಜತೆಗೇನೇ ಹಿಂದೂ ಯುವತಿಯನ್ನು ಮದುವೆಯಾಗಿರುವ ಬಾಲಿವುಡ್ ನಟರಾಗಿರುವ ಶಾರುಖ್ ಖಾನ್ (ಪತ್ನಿ ಗೌರಿ ಖಾನ್) ಹಾಗೂ ಮೊದಲ ಹಿಂದೂ ಪತ್ನಿಗೆ ವಿಚ್ಛೇದನ ನೀಡಿ, ನಟಿ ಕರೀನಾ ಕಪೂರ್ ಅವರನ್ನು ಮದುವೆಯಾಗಿರುವ ಸೈಫ್ ಅಲಿ ಖಾನ್ ಅವರ ಹೆಸರೂ ಇದೀಗ ವ್ಯಾಪಕವಾಗಿ ವ್ಯಕ್ತಿಗಳ ಕೈಯಲ್ಲಿ ಲವ್ ಜಿಹಾದ್ ಕೃತ್ಯವಾಗಿ ಕಾಣುತ್ತಿದೆ.

ಅಮೀರ್ ಕಿರಣ್ ರಾವ್ ದಾಂಪತ್ಯ ಅಂತ್ಯಕ್ಕೆ ಕಾರಣ ಏನು ಗೊತ್ತಾ ?

2016ರಲ್ಲಿ ತೆರೆಗೆ ಬಂದ ‘ದಂಗಲ್​’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ನಿತೇಶ್​ ತಿವಾರಿ ನಿರ್ದೇಶನದ ಈ ಸಿನಿಮಾ ಬಾಕ್ಸ್​ ಆಫೀಸ್​​ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಈ ಚಿತ್ರದಲ್ಲಿ ಫಾತಿಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಟ ಆಮಿರ್​ ಖಾನ್​ ಹಾಗೂ ನಿರ್ಮಾಪಕಿ ಕಿರಣ್​ ರಾವ್​ ಬೇರೆ ಆಗುತ್ತಿರುವುದಾಗಿ ಈಗ ಘೋಷಣೆ ಮಾಡಿದ್ದಾರೆ. 15 ವರ್ಷಗಳ ದಾಂಪತ್ಯಕ್ಕೆ ದಂಪತಿ ಕೊನೆ ಹಾಡುತ್ತಿರುವ ವಿಚಾರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇಬ್ಬರೂ ವಿಚ್ಛೇದನ ಪಡೆಯುತ್ತಿರುವ ಬೆನ್ನಲ್ಲೇ ಫಾತಿಮಾ ಸೈನಾ ಷೇಖ್​ ಹೆಸರು ಮುನ್ನೆಲೆಗೆ ಬಂದಿದೆ. ಫಾತಿಮಾಗಾಗಿಯೇ ಅಮಿರ್​ ವಿಚ್ಛೇದನ ಪಡೆದುಕೊಂಡಿದ್ದಾರೆ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ.

ಒಂದು ವೇಳೆ ಈ ನಟರುಗಳು ನಿಜವಾಗಿಯೂ ಪ್ರೀತಿ ಮಾಡುತ್ತಿದ್ದುದೇ ಹೌದಾದರೆ, ಈ ನಟರನ್ನು ಹಿಂದೂ ಧರ್ಮಕ್ಕೆ ಮತಾಂತರ ಆಗಲು ಹೇಳಿ ನೋಡುವ ಎಂದು ಹಲವರು ಚಾಲೆಂಜ್ ಮಾಡುತ್ತಿದ್ದಾರೆ.

Leave A Reply

Your email address will not be published.