ತುಳು ನಟ, ದೇಯಿ ಬೈದೇತಿ ಚಿತ್ರ ನಿರ್ದೇಶಕನ ಪುತ್ರ ಬೈಕ್ ಟ್ಯಾಂಕರ್ ಡಿಕ್ಕಿ ಸಂಭವಿಸಿ ಸಾವು

ಬೆಂಗಳೂರು: ತುಳು ನಟ ಮತ್ತು ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ಅವರ ಮಗ ಬೈಕ್ ಅಪಘಾತದಲ್ಲಿ ದುರಂತ ಸಾವು ಕಂಡಿದ್ದಾರೆ.

ಬೆಂಗಳೂರಿನ ಬ್ಯಾಡರಹಳ್ಳಿಯ ನ್ಯೂ ಲಿಂಕ್ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಸೂರ್ಯೋದಯ ಅವರ ಪುತ್ರ, 20 ವರ್ಷ ಪ್ರಾಯದ ಮಯೂರ್ ಮೃತ ಯುವಕ.

ನಿನ್ನೆ ರಾತ್ರಿ ಮಯೂರ್ ತನ್ನ ಕೆಟಿಎಂ ಬೈಕ್ ನಲ್ಲಿ ತೆರಳುತ್ತಿದ್ದಾಗ, ಬೈಕ್ ಟ್ಯಾಂಕರ್ ಗಾಡಿಗೆ ಡಿಕ್ಕಿ ಹೊಡೆದಿದೆ. ಆ ಅಪಘಾತಸಲ್ಲಿ ಮಯೂರ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೂರ್ಯೋದಯ ಪೆರಂಪಲ್ಲಿ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದು ಇತ್ತೀಚೆಗೆ, ದೇಯಿ ಬೈದೆತಿ ಎಂಬ ತುಳು ಚಿತ್ರವನ್ನು ನಿರ್ದೇಶಿಸಿದ್ದಾರೆ.

Leave A Reply

Your email address will not be published.