ಮುಸ್ಲಿಂ ಹುಡುಗನ ಬಣ್ಣದ ಮಾತಿಗೆ ಬರ್ನ್ ಆಯಿತು ಹಿಂದೂ ಹುಡುಗಿಯ ಬದುಕು | ಆಕೆಗೆ ಮಾವನ ಜತೆ ಸೆಕ್ಸ್ ಮಾಡಲು ಒತ್ತಾಯ ಮಾಡಿದ್ದ ಗಂಡ !!

ಶ್ರೀನಗರ: ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ತನಗೆ ನ್ಯಾಯ ದೊರಕಿಸಿಕೊಡುವಂತೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆದಿದ್ದು, ಅದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಘಟನೆಯ ಹಿಂದಿನ ಸತ್ಯಗಳು ಒಂದು ರೀತಿಯ ಅಸಹ್ಯಕ್ಕೆ ಮತ್ತು ಕಳವಳಕ್ಕೆ ಕಾರಣವಾಗಿವೆ.

ಅವಳು ಜಲಂಧರ್ ಆಸ್ಪತ್ರೆಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗಿಯಾಗಿದ್ದ ಈ ದುರಂತ ಕಥೆಯ ನಾಯಕಿ ಹಿಂದೂ ಯುವತಿ. ತುಂಬಾ ಚುರುಕಿನ ಸುಂದರ ಹುಡುಗಿ. ಸಾಕಷ್ಟು ಅನುಕೂಲವಂತರೆ. ಆಕೆ ಓರ್ವ ಹುಡುಗನನ್ನು ಪ್ರೀತಿಸಿದ್ದಳು. ಅಷ್ಟಕ್ಕೂ ಆತ ಅಪರಿಚಿತ ಹುಡುಗನಲ್ಲ. ಆತ ಕೂಡ ಆಕೆಯ ಜೊತೆಗೆ ತನ್ನ ಶಾಲಾ ದಿನಗಳಿಂದಲೂ ಸಹಪಾಠಿಯಾಗಿದ್ದ ಹುಡುಗ. ಸ್ವಭಾವತಃ ಒಳ್ಳೆಯವನು ಎನ್ನಬಹುದಾದ ವ್ಯಕ್ತಿತ್ವ. ಅದೇ ಕಾರಣಕ್ಕೆ ಆಕೆ ಆತನನ್ನು ಇಷ್ಟಪಡುತ್ತಾಳೆ. ಆಕೆಯ ಮನೆಯವರು ಆತನನ್ನು ಒಪ್ಪಿಕೊಳ್ಳುವುದಿಲ್ಲ. ಕಾರಣ ಆತ ಮುಸ್ಲಿಂ. ಆಕೆ ಅಪ್ಪಟ ಹಿಂದೂ ಹುಡುಗಿ. ಈ ಮದುವೆ ಬರ್ಕತ್ ಆಗಲ್ಲ. ನೀನು ದಿನನಿತ್ಯ ಜೀವನದಲ್ಲಿ ನಡೆಯುವ ಘಟನೆಗಳನ್ನು ನೋಡುತ್ತಿಲ್ಲವೆ, ಹೋಗಿ ಹೋಗಿ ಗುಂಡಿಗೆ ಬೀಳಬೇಡ ಎಂದು ಮನೆಯವರು ಆಕೆಗೆ ಎಷ್ಟೋ ಬುದ್ಧಿವಾದ ಹೇಳಿದ್ದರು.


ಆಕೆಯ ಮನೆಯವರಿಗೆ ಇಷ್ಟವಿಲ್ಲದೆ ಹೋದರೂ, ಆಕೆ ಎಲ್ಲರನ್ನೂ ಧಿಕ್ಕರಿಸಿ ಅವರಿಬ್ಬರೂ ಮದುವೆಯಾಗುತ್ತಾರೆ. ಮದುವೆ ನಡೆದು, ಆಕೆ ಆತನ ಮನೆಯ ಹೊಸಲು ತುಳಿಯಲು ಪುರುಸೊತ್ತಿಲ್ಲ ; ಆತನ ಮನೆಯವರಿಂದ ದೊಡ್ಡ ಬೇಡಿಕೆ ಆಕೆಯ ಮುಂದೆ ಧುತ್ತನೆ ಬಂದು ನಿಂತಿತ್ತು !!!

ಅಲ್ಲಿ, ಆಕೆಯನ್ನು ಪ್ರೀತಿಸಿ ಮದುವೆಯಾದ ಹುಡುಗ ಮತ್ತು ಆತನ ಕುಟುಂಬ ಆಕೆಯ ಮತಾಂತರಕ್ಕೆ ಒತ್ತಾಯಿಸಿತ್ತು. ಅದು ಆಕೆ ಎಂದೂ ನಿರೀಕ್ಷಿಸದ ಗಿಫ್ಟ್ !
ಆ ಯುವಕ ಮದುವೆಯ ಸಂದರ್ಭದಲ್ಲಿ ಮತಾಂತರದ ಷರತ್ತು ಹಾಕಿರಲಿಲ್ಲ. ಆತನ ಕುಟುಂಬದವರು ಕೂಡ ಮತಾಂತರವಾಗಲು ಹೇಳಿರಲಿಲ್ಲ. ಆದರೆ, ಮದುವೆಯಾಗಿ ಮನೆಗೆ ಹೋದ ಯುವತಿಗೆ ಶಾಕ್ ಕಾದಿತ್ತು. ಗಂಡ ಮತ್ತು ಆತನ ಮನೆಯವರ ಬಣ್ಣ ಮಾಸಲು ಶುರುವಾಗಿತ್ತು. ಮುಂದಿನದ್ದೆಲ್ಲ ಬರೀ ನೋವು ತುಂಬಿದ ಕಥೆ.

ಹಾಗೆ ಆತ ಆಕೆಯನ್ನು ಉತ್ತರಪ್ರದೇಶದ ಮಸೀದಿಯಲ್ಲಿ ಮದುವೆಯಾದ ಸಂದರ್ಭದಲ್ಲಿ ಯುವತಿಯ ಹೆಸರನ್ನು ಆಕೆಗೆ ತಿಳಿಯದಂತೆ ಬದಲಾಯಿಸಲಾಗಿತ್ತು. ಪಾಪ, ಮುಗ್ಧ ಹುಡುಗಿ. ನೂರೆಂಟು ಕನಸು ಕಂಡಿದ್ದ ಆಕೆಗೆ ತಮ್ಮದು ಅಮರ ಪ್ರೇಮ ಆಗಬೇಕೆಂಬ ಕನಸು ಇತ್ತು. ಅದೇ ಪ್ರೀತಿಯ ಗುಂಗಿನಲ್ಲಿ ಇದ್ದ ಹುಡುಗಿಗೆ ಮತ್ತೊಂದು ಶಾಕ್ ಕಾದಿತ್ತು.

ಆಕೆ ಪ್ರೀತಿಸಿ ಒಳ್ಳೆಯವನು ಎಂದು ಮದುವೆಯಾಗಿದ್ದ ಯುವಕನಿಗೆ ಈ ಮೊದಲೇ ಮದುವೆಯಾಗಿರುವುದು ಕೂಡ ಯುವತಿಗೆ ಗೊತ್ತಾಗಿ ಆಕೆ ಪತರಗುಟ್ಟಿ ಹೋಗಿದ್ದಳು.

ಇನ್ನು ಗಂಡನ ತಾಯಿಗೆ ಕ್ಯಾನ್ಸರ್ ಬಾಧಿಸಿತ್ತು. ತನ್ನ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಕ್ಯಾನ್ಸರನ್ನು ಅಂಟಿಸಿಕೊಂಡು ಕೂತಿದ್ದ ಆ ಅತ್ತೆ, ಆಕೆಯ ಪತಿಯೊಂದಿಗೆ ಅಂದರೆ, ಹುಡುಗಿಯ ಮಾವನೊಂದಿಗೆ ಹಾಸಿಗೆ ಹಂಚಿಕೊಳ್ಳಬೇಕೆಂದು ಯುವತಿಗೆ ಒತ್ತಾಯಿಸಿದ್ದಾಳೆ. ತಾನು ಕ್ಯಾನ್ಸರ್ ರೋಗಿಯಾಗಿರುವ ಕಾರಣ ಗಂಡನಿಗೆ ಲೈಂಗಿಕ ಸುಖ ಸಿಗುತ್ತಿಲ್ಲ. ನೀನೇ ಸಹಕರಿಸು ಎಂದು ಸೊಸೆಗೆ ಹೇಳಿದ್ದಾಳೆ. ವಿಚಿತ್ರ ಎಂದರೆ ಆಕೆಯ ಗಂಡನು ಕೂಡ ಸಾಥ್ ನೀಡಿದ್ದಾನೆ. ಅತ್ತೆಯ ಮಾತಿಗೆ ಸಹಮತ ವ್ಯಕ್ತಪಡಿಸಿ ಆತ ಕೂಡ ತನ್ನ ತಂದೆಯೊಂದಿಗೆ ಮಲಗಲು ಪತ್ನಿಯನ್ನು ಒತ್ತಾಯಿಸಿದ್ದಾನೆ.

ಯುವತಿ ಇದಕ್ಕೆಲ್ಲ ಒಪ್ಪದಿದ್ದಾಗ ಆಸ್ತಿ ಹಣ ಕೊಡುವ ಆಮಿಷವೊಡ್ಡಿದ್ದು, ಯುವತಿ ಗಂಡನ ಮನೆಯವರ ಆಮಿಷಕ್ಕೆ ಬಲಿಯಾಗದೇ ಪ್ರತಿಭಟಿಸಿದಾಗ, ಆಕೆಯನ್ನು ವೇಶ್ಯಾವಾಟಿಕೆಗೆ ಮಾರಲು ಮುಂದಾಗಿದ್ದರು ಎಂದು ಆಕೆ ಗವರ್ನರ್ ಗೆ ಬರೆದ ಪತ್ರದಲ್ಲಿ ದೂರಲಾಗಿದೆ.

Leave A Reply

Your email address will not be published.