ಮಂಗಳೂರು | ಸ್ವಂತ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಅಪ್ಪ, ಜೀವನ್ಮರಣ ಸ್ಥಿತಿಯಲ್ಲಿದ್ದ ಮಗ ಸ್ವಾಮೀತ್ ಶೆಟ್ಟಿ ಸಾವು

ಮಂಗಳೂರು: ತನ್ನ ತಂದೆಯೇ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಶ್ಟ ಪ್ರಕರಣ ಮಂಗಳೂರಿನಿಂದ ವರದಿಯಾಗಿದೆ.

ಇದೀಗ ಸುಟ್ಟ ಗಾಯದೊಂದಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ನತದೃಷ್ಟ ಪುತ್ರ ಸಾವನ್ನಪ್ಪಿದ್ದಾರೆ.

ಮಂಗ್ಳೂರು ನಗರದ ಹೊರವಲಯದ ಜಪ್ಪಿನಮೊಗರು ಕೊಪ್ಪರಿಗೆಗುತ್ತು ಎಂಬಲ್ಲಿ ರಾತ್ರಿ ದನ ಕಟ್ಟುವ ವಿಚಾರದಲ್ಲಿ ತಂದೆ ಮಗನ ಮದ್ಯೆ ಜಗಳ ಬಂದಿತ್ತು. ಆಗ ಕೋಪಗೊಂಡ ತಂದೆ ವಿಶ್ವನಾಥ ಶೆಟ್ಟಿ ತನ್ನ ಪುತ್ರ ಸ್ವಾಮೀತ್ ಶೆಟ್ಟಿ (25) ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಇದರಿಂದ ಸುಟ್ಟಗಾಯಗಳಾಗಿದ್ದ ಮಗ ಸ್ವಾಮೀತ್ ಶೆಟ್ಟಿಯನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು.

ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರ ಬೆನ್ನಲ್ಲೇ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಚಿಕಿತ್ಸೆ ಅರೆಮರ್ದ ಬೆಂದ ಸ್ಥಿತಿಯಲ್ಲಿದ್ದ ಮಗ ಸ್ವಾಮೀತ್ ಶೆಟ್ಟಿ ಕೊನೆಯುಸಿರೆಳೆದಿದ್ದಾರೆ. ಕೋಪದ ಕೈಗೆ ಬುದ್ಧಿ ಕೊಟ್ಟು ತನ್ನ ಸ್ವಂತ ಮಗನನ್ನು ಅಪ್ಪನೇ ಕೊಲೆ ಮಾಡಿದಂತಾಗಿದೆ.

Leave A Reply

Your email address will not be published.