ಬಿದ್ದು ಸಿಕ್ಕಿದ ಮೊಬೈಲ್ ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕ ಮೆರೆದ ಕಾಣಿಯೂರಿನ ಶಾಲಾ ಮಕ್ಕಳು

ಕಡಬ : ಕಾಣಿಯೂರು ಶಾಲಾ ಮಕ್ಕಳಾದ ಲಿಖಿತ್ ಮರಕಡ ಮತ್ತು ಹರ್ಷನ್ ಕಂಪ ಎಂಬ ಇಬ್ಬರು ಮಕ್ಕಳಿಗೆ ಕಾಣಿಯೂರು ರಾಶಿ ಕಾಂಪ್ಲೆಕ್ಸ್ ಪಕ್ಕ 15 ಸಾವಿರ ಬೆಲೆ ಬಾಳುವ ಮೊಬೈಲ್ ಫೋನ್ ಮತ್ತು ಹಣ ಬಿದ್ದು ಸಿಕ್ಕಿದೆ.

ತಕ್ಷಣವೇ ಆ ಮಕ್ಕಳು ಕಾಣಿಯೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳ್ಳಾರೆಯ ಪೋಲಿಸರಾದ ಮಂಜುನಾಥ ಎಸ್‌ ಹೆಚ್ ಮತ್ತು ಮೋಹನ್ ಜಿ ಎಸ್ ರವರಿಗೆ ಒಪ್ಪಿಸಿ ತಕ್ಷಣ ಪೊಲೀಸರು ಕಾಲ್ ಮಾಡಿ ವಾರಸುದಾರರಾದ ಚೇತನ್ ಕುದ್ಮಾರು ಅವರಿಗೆ ಒಪ್ಪಿಸಿದರು.

ಪೊಲೀಸರು ಮಕ್ಕಳ ಪ್ರಮಾಣಿಕತೆಗೆ ಅಭಿನಂದಿಸಿದರು‌. ಈ ಸಂದರ್ಭದಲ್ಲಿ ಕಾಣಿಯೂರು ಸದಾನಂದ ಆಚಾರ್ಯ ಭಾಗವಹಿಸಿದರು

Leave A Reply

Your email address will not be published.