ಸುಳ್ಯ : ಇಲಿ ಜ್ವರಕ್ಕೆ ಯುವಕ ಬಲಿ

ಸುಳ್ಯ ತಾಲೂಕಿನ ತೊಡಿಕಾನದಲ್ಲಿ ಇಲಿ ಜ್ವರದಿಂದಾಗಿ ಯುವಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ.

ತೊಡಿಕಾನ ಗ್ರಾಮದ ಪಂಜಿಕೋಡಿ ನಿವಾಸಿ ಗಂಗಾಧರ ಪೂಜಾರಿ ಎಂಬ ಯುವಕ ಇಲಿ ಜ್ವರದಿಂದ ಮೃತಪಟ್ಟವರು.

ಪಂಜಿಕೋಡಿಯ ಸಂಕಪ್ಪ ಪೂಜಾರಿಯವರ ಪುತ್ರ ಗಂಗಾಧರ ಪೂಜಾರಿ (4೦ವರ್ಷ) ರವರಿಗೆ ಕೆಲವು ದಿನಗಳಿಂದ ಜ್ವರ ಬಾಧಿಸಿತ್ತು, ಸ್ಥಳಿಯವಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಸುಳ್ಯಕ್ಕೆ ಬಂದು ಮಂಗಳೂರಿನ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ರಾತ್ರಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.

ಮೃತರು ತಂದೆ, ತಾಯಿ, ತಂಗಿ, ಪತ್ನಿ ಹಾಗೂ ಗಂಡು ಮಗುವೊಂದನ್ನು ಅಗಲಿದ್ದಾರೆ.

Leave A Reply

Your email address will not be published.