ತಾಳಿಕಟ್ಟುವ ಶುಭವೇಳೆ…..ನಿರ್ಬಂದ ಸಡಿಲಿಕೆ ಮಾಡಿದ ಸರಕಾರ | ಕಲ್ಯಾಣ ಮಂಟಪದಲ್ಲೂ ಮದುವೆಗೆ ಅಸ್ತು ಎಂದ ಸರಕಾರ | 40 ಮಂದಿಗೆ ಅವಕಾಶ

ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ರಾಜ್ಯ ಸರಕಾರ ಸಡಿಲಿಕೆ ಮಾಡಿ, ಮಾರ್ಗಸೂಚಿ ಹೊರಡಿಸಿದೆ.
ಈ ಆದೇಶ ಜೂ.28ರಿಂದ ಜಾರಿಗೆ ಬರಲಿದೆ.

ಮೈಸೂರು ಜಿಲ್ಲೆಯನ್ನು ಹೊರತುಪಡಿಸಿ, ಉಳಿದ ಜಿಲ್ಲೆಗಳಲ್ಲಿ ಈ ಆದೇಶ ಅನ್ವಯವಾಗಲಿದೆ. ಮದುವೆ ಸಮಾರಂಭದಲ್ಲಿ ಗರಿಷ್ಠ 40 ಮಂದಿಗೆ ಅವಕಾಶವಿದ್ದು, ಪೂರ್ವಾನುಮತಿ ಹಾಗೂ ಭಾಗವಹಿಸುವ ಎಲ್ಲರಿಗೂ ಪಾಸ್ ನೀಡುವುದು ಕಡ್ಡಾಯ.

ಮದುವೆ ಸಮಾರಂಭ ಏರ್ಪಡಿಸುವವರು ಆಯಾ ಸ್ಥಳೀಯಾಡಳಿತದಿಂದ ಸೂಕ್ತ ಅನುಮತಿ ಪಡೆದುಕೊಳ್ಳಬೇಕು. ಸಭಾಂಗಣ ಅಥವಾ ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭ ನಡೆಯಲು ಅವಕಾಶ ಕಲ್ಪಿಸಲಾಗಿದೆ.

Leave A Reply

Your email address will not be published.