ಬೆಂಗಳೂರಿನಲ್ಲಿ ಟಿಪ್ಪರ್ – ಬೈಕ್ ನಡುವೆ ಅಪಘಾತ | ಕರಾಯದ ನಿತೇಶ್ ಮೃತ್ಯು

ಬೆಂಗಳೂರಿನಲ್ಲಿ ಟಿಪ್ಪರ್ -ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೆಳ್ತಂಗಡಿ ತಾಲೂಕಿನ ಕರಾಯದ‌ ನಿವಾಸಿಯೋರ್ವರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ಕರಾಯ ಗ್ರಾಮದ ಕೊಂಬೆಟ್ಟಿಮಾರು ನಿವಾಸಿ ವಿಶ್ವನಾಥ ನಾಯ್ಕರ ಪುತ್ರ ನಿತೇಶ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನ‌ ಉದ್ಯೋಗದಲ್ಲಿದ್ದ ಅವರು ಲಾಕ್‌ಡೌನ್ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು.ಎರಡು ದಿನದ ಹಿಂದೆಯಷ್ಟೇ ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಪುನಃ ಉದ್ಯೋಗಕ್ಕೆ ಬೆಂಗಳೂರಿಗೆ ತೆರಳಿದ್ದರು.

Leave A Reply

Your email address will not be published.