ಹೊಸಕನ್ನಡ ವರದಿಯ ಇಂಪಾಕ್ಟ್..ರಸ್ತೆಯಲ್ಲೇ ಇದ್ದ ಮರದ ಕೊಂಬೆಗಳನ್ನು ತೆರವುಗೊಳಿಸಿದ ಮೆಸ್ಕಾಂ ಇಲಾಖೆ

ಕಡಬದ ಮುಖ್ಯ ರಸ್ತೆ ಬದಿಯಲ್ಲಿ ಮೆಸ್ಕಾಂ ವತಿಯಿಂದ ಕಡಿದು ಹಾಕಿದ ಮರದ ಕೊಂಬೆಗಳು ಹಾಗೇ ಉಳಿದಿದ್ದು, ಈ ಬಗ್ಗೆ ಹೊಸಕನ್ನಡವು ‘ನಿದ್ದೆಯಲ್ಲಿದ್ದಾರೆಯೇ ಅಧಿಕಾರಿಗಳು?’ಎಂಬ ಶೀರ್ಷಿಕೆಯಡಿ ವರದಿ ಮಾಡಿತ್ತು.

ಹೊಸಕನ್ನಡದ ಈ ವರದಿಯ ಬಳಿಕ ಎಚ್ಚೆತ್ತ ಕಡಬ ಮೆಸ್ಕಾಂ ಇಲಾಖೆಯು ಮರದ ಕೊಂಬೆಗಳನ್ನು ರಸ್ತೆ ಬದಿಯಿಂದ ತೆರವುಗೊಳಿಸಿದ್ದು, ವಾಹನ ಸವಾರರಿಗೆ, ದಾರಿಹೋಕರಿಗೆ ಆಗುತ್ತಿರುವ ತೊಂದರೆಯು ತಪ್ಪಿದಂತಾಗಿದೆ.

Leave A Reply

Your email address will not be published.