ಬಂಟ್ವಾಳ : ಚಾಲಕನ‌ ನಿಯಂತ್ರಣ ತಪ್ಪಿ ಬರೆಗೆ ಲಾರಿ ಡಿಕ್ಕಿ | ಚಾಲಕ,ನಿರ್ವಾಹಕಗೆ ಗಾಯ

ಮಂಗಳೂರು: ಬಂಟ್ವಾಳದಲ್ಲಿ ಚಾಲಕ‌ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆ ಬದಿಯ ಬರೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಘಟನೆಯಿಂದ ಚಾಲಕ ಹಾಗೂ ನಿರ್ವಾಹಕರಿಗೆ ಗಾಯವಾಗಿದ್ದು,ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತೂರಿಗೆ ಶಿವಮೊಗ್ಗದಿಂದ ಅಕ್ಕಿ ಚೀಲಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿ ಬಂಟ್ವಾಳದ ಎಸ್.ವಿ.ಎಸ್.ಶಾಲಾಬಳಿ ಚಾಲಕನ‌ ನಿಯಂತ್ರಣ ತಪ್ಪಿ ಬರೆಗೆ ಡಿಕ್ಕಿಹೊಡೆಯಿತು ಎನ್ನಲಾಗಿದೆ.

ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave A Reply

Your email address will not be published.