ಸೋರುತ್ತಿದ್ದ ಮನೆಯ ಹಂಚು ಸರಿಪಡಿಸುವ ವೇಳೆ ವಿದ್ಯುತ್ ತಂತಿಗೆ ಏಣಿ ತಗುಲಿ ವ್ಯಕ್ತಿ ಸಾವು

ಮಂಗಳೂರು, ಜೂನ್ 15: ಸೋರುತ್ತಿದ್ದ ಮನೆಯ ಹಂಚು ಸರಿಪಡಿಸುವ ವೇಳೆ ವಿದ್ಯುತ್ ತಂತಿಗೆ ಏಣಿ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮುಲ್ಕಿಯಲ್ಲಿ ನಡೆದಿದೆ.

ಮೂಲ್ಕಿಯ ಐಕಳ ಬಳಿಯ ಉಳೆಪಾಡಿ ಪುರಂಜ ಗುಡ್ಡೆ ಎಂಬಲ್ಲಿ ಈ ದುರ್ಘಟನೆ ನಡೆದಿದ್ದು, ಸಾವನ್ನಪ್ಪಿದ ವ್ಯಕ್ತಿಯನ್ನು ಮಾಧವ ಆಚಾರ್ಯ (55) ಎಂದು ಗುರುತಿಸಲಾಗಿದೆ.

ಗಾಳಿ-ಮಳೆಯ ಪರಿಣಾಮ ಹಾನಿಗೀಡಾಗಿದ್ದ ಮನೆಯ ಹಂಚನ್ನು ಸರಿಪಡಿಸಲು ಜನಾರ್ಧನ ಆಚಾರ್ಯ ಅಲ್ಯುಮಿನಿಯಂ ಏಣಿ ಇಟ್ಟು ಮೇಲೇರುತ್ತಿದ್ದರು.
ಆಗ ಸಂದರ್ಭ ಆಯತಪ್ಪಿ ಏಣಿ ಜಾರಿ ವಿದ್ಯುತ್ ತಂತಿಗೆ ಬೀಳುವಂತಾಗಿದೆ. ಆಗ ಮಾಧವ ಆಚಾರ್ಯ ಅವರು ತಂತಿಗೆ ಏಣಿ ಬೀಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಏಣಿಯನ್ನು ಹಿಡಿದಿದ್ದಾರೆ.
ಆಗ ವಿದ್ಯುತ್ ಶಾಕ್ ಆಗಿ ತಕ್ಷಣ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.ಅವರನ್ನು ಕಿನ್ನಿಗೋಳಿ ಆಸ್ಪತ್ರೆಗೆ ಸಾಗಿಸುವ ಮಾರ್ಗದ ನಡುವೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇದೀಗ ಮೃತ ಮಾಧವ ಆಚಾರ್ಯ ಅವರು ಮರದ ಕೆಲಸ ಮಾಡುತ್ತಿದ್ದು, ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಘಟನೆಯ ಬಗ್ಗೆ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Leave A Reply

Your email address will not be published.