ನೆಟ್ಟಣ | ಕೋವಿಡ್ ಕೇರ್ ಟೀಮ್ ನಿಂದ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ

ನೆಟ್ಟಣ : ಕೋವಿಡ್ ಕೇರ್ ಟೀಂ, ಇದರ ನೇತೃತ್ವದಲ್ಲಿ ನೆಟ್ಟಣ ಸಂತ ಮೇರಿಸ್ ಚರ್ಚ್ ಇದರ ವತಿಯಿಂದ ದಾನಿಗಳ ಸಹಕಾರದೊಂದಿಗೆ ಬಿಳಿನೆಲೆ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಪಾಸಿಟಿವ್ ಆದ ಬಡ ಕುಟುಂಬಗಳಿಗೆ ಮತ್ತು ಇನ್ನಿತರ ಖಾಯಿಲೆ ಹಾಗೂ ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡ ಬಡ ಕುಟುಂಬಗಳಿಗೆ ಜಾತಿ, ಮತ, ಪಕ್ಷ ಬೇಧ ವಿಲ್ಲದೆ ದಿನಸಿ ಸಾಮಾಗ್ರಿಗಳ ಕಿಟ್ಟನ್ನು ವಿತರಿಸಲಾಯಿತು.

ಅದಲ್ಲದೆ ಕ್ವಾರಂಟೈನ್ ನಲ್ಲಿ ಇರುವವರಿಗೆ ಪಲ್ಸ್ ಒಕ್ಸಿಮೀಟರ್ ಮತ್ತು ಸಾನಿಟೈಝರ್ ಅನ್ನು ಈ ತಂಡ ಒದಗಿಸಿದೆ. ನೆಟ್ಟಣ ಸಂತ ಮೇರಿಸ್ ಚರ್ಚಿನ ಧರ್ಮಗುರು ರೆ ಫಾ ಆದರ್ಶ್ ಜೋಸೆಫ್ ಅವರ ಮಾರ್ಗದರ್ಶಕನದಲ್ಲಿ ಪ್ರಕಾಶ್ ಓ ಎಂ, ಬಿಬೀನ್ ಜೋಸೆಫ್, ಜೂಲಿಯಾನ್ ವೆಶ್ನಾಲ್, ಸುನಿಲ್ ಪಿ .ಟಿ, ಸೆಬಾಸ್ಟಿನ್ ಪಿ ಪಿ‌, ರಾಜೇಶ್ ಪಿ ಪಿ‌, ಅಬ್ರಾಹಂ ಸರ್, ಪ್ರಥ್ವಿ ರಾಜ್ ಅಲೆಕ್ಸ್, ಟಿಪ್ಸನ್ ಟೋಮ್ ಕೋವಿಡ್ ಕೇರ್ ನ ಈ ತಂಡವು ಜಾತಿ ಧರ್ಮ ಬೇಧ ಭಾವ ಇಲ್ಲದೆ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Leave A Reply

Your email address will not be published.