ಕಡಬ ಠಾಣೆಯ ಎ.ಎಸ್.ಐ.ರವಿ.ಎಂ.ರಾಜ್ಯ ಗುಪ್ತವಾರ್ತೆ ದಳದ ಮಂಗಳೂರು ಘಟಕದ ಎಸ್.ಐ ಆಗಿ ಭಡ್ತಿಗೊಂಡು ವರ್ಗಾವಣೆ

ಕಡಬ: ಇಲ್ಲಿನ ಠಾಣೆಯಲ್ಲಿ ಎ.ಎಸ್.ಐ. ಆಗಿರುವ ರವಿ.ಎಂ. ಅವರು ಎಸ್.ಐ. ಆಗಿ ಭಡ್ತಿಗೊಂಡು ರಾಜ್ಯ ಗುಪ್ತವಾರ್ತ ದಳದ ಮಂಗಳೂರು ಘಟಕಕ್ಕೆ ವರ್ಗಾವಣೆ ಗೊಂಡಿದ್ದಾರೆ.
ಇವರು 1993ರಲ್ಲಿ ಕಾನ್ಸ್ ಸ್ಟೇಬಲ್ ಆಗಿ ಕರ್ತವ್ಯಕ್ಕೆ ನೇಮಕಗೊಂಡು ಮೂಡಬಿದ್ರೆ ಠಾಣೆಯಲ್ಲಿ 7 ವರ್ಷ, ಕಡಬ ಠಾಣೆಯಲ್ಲಿ 6 ವರ್ಷ,ಸುಳ್ಯ ಠಾಣೆಯಲ್ಲಿ 6 ವರ್ಷ ಕರ್ತವ್ಯ ನಿರ್ವಹಿಸಿ ಬಳಿಕ ಹೆಡ್ ಕಾನ್ಸ್ ಸ್ಟೇಬಲ್ ಆಗಿ ಭಡ್ತಿಗೊಂಡು ಉಪ್ಪಿನಂಗಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಎ.ಎಸ್.ಐ.ಆಗಿ ಭಡ್ತಿಗೊಂಡು ಕಡಬ ಠಾಣೆಯಲ್ಲಿ ಕಳೆದೆರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ಮಧ್ಯೆ ಸುಬ್ರಹ್ಮಣ್ಯ ಠಾಣೆಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ಇವರು ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮಲೆತ್ತಡ್ಕ ನಿವಾಸಿಯಾಗಿದ್ದು ಪುಣಚ .ಹಿ.ಪ್ರಾ.ಶಾಲೆ ಪರಿಯಲ್ತಡ್ಕ ಹಾಗೂ ಶ್ರೀದೇವಿ ಪ್ರೌಢ ಶಾಲೆ ದೇವಿನಗರ ಪುಣಚದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಇವರ ಪತ್ನಿ ಮೋಹಿನಿ ಯವರು ಮಂಗಳೂರು ಜೆ.ಎಮ್.ಸಿ. ನ್ಯಾಯಾಲಯ ದಲ್ಲಿ ಉದ್ಯೋಗಿಯಾಗಿದ್ದಾರೆ.

Leave A Reply

Your email address will not be published.