ಧರ್ಮಸ್ಥಳ ಎಸೈ ಪವನ್ ನಾಯಕ್ ಮತ್ತು ಬೆಳ್ತಂಗಡಿ ಸಂಚಾರಿ ಎಸೈ ಭಾರತಿ ಶೆಟ್ಟಿ ಸೇರಿ ಒಟ್ಟು 11 ಜನ ವರ್ಗಾವಣೆ

ಧರ್ಮಸ್ಥಳ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪವನ್ ನಾಯಕ್ ಅವರಿಗೆ ಬೈಂದೂರು ಗ್ರಾಮಾಂತರ ಠಾಣೆಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.

ಅದೇ ರೀತಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀ ಶೆಟ್ಟಿಯವರನ್ನು ಬಂಟ್ವಾಳ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಉಡುಪಿ ಜಿಲ್ಲೆಯ ಬೈಂದೂರು ಎಸೈ ಆಗಿದ್ದ ಸಂಗೀತ ಅವರನ್ನು ಉತ್ತರ ಕನ್ನಡದ ಅಂಬಿಕಾ ನಗರ ಕ್ಕೆ ವರ್ಗಾವಣೆ ಮಾಡಲಾಗಿದೆ.

ಮಂಗಳೂರು ಮೆಸ್ಕಾಂ ನಲ್ಲಿದ್ದ ಲಕ್ಷ್ಮಣ್ ಸಿ ಟಿ ಅವರನ್ನು ಬೆಳ್ತಂಗಡಿಯ ಸಂಚಾರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಮಂಗಳೂರಿನ ಡಿಸಿಆರ್ ಬಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿತ್ಯಾನಂದ ಗೌಡ ಅವರನ್ನು ಬಾಳೆಹೊನ್ನೂರು ವರ್ಗಾಯಿಸಿ ಆದೇಶ ಬಂದಿದೆ.

ಒಟ್ಟು 12 ಜನರ ವರ್ಗಾವಣೆ ಮಾಡಿ ಮಂಗಳೂರು ಪಶ್ಚಿಮ ವಲಯ ಪೊಲೀಸ್ ನಿರೀಕ್ಷಕರಾದ ದೇವ ಜ್ಯೋತಿ ರೈ ಅವರು ಆದೇಶ ಹೊರಡಿಸಿದ್ದಾರೆ.

Leave A Reply

Your email address will not be published.