ಸಮಾಜ ಸೇವಕ ಪವನ್ ಕುಮಾರ್ ಶಿರ್ವ ಅವರ ಮನವಿಗೆ 50 ಕಿಟ್ ವಿತರಿಸಿದ ರೂಪೇಶ್ ಶೆಟ್ಟಿ

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬಂಟಕಲ್ ನ ಗಿರಿನಗರದಲ್ಲಿ ಸುಮಾರು 50 ಕುಟುಂಬದವರಿಗೆ ತುಂಬಾ ಕಷ್ಟದಿಂದ ಇರುವ ಜನರಿಗೆ ತುಳು ಚಿತ್ರ ನಟ ರೂಪೇಶ್ ಶೆಟ್ಟಿ ಯವರು ನೀಡಿದರು. ಜನರ ಮೇಲೆ ಇರುವ ಪ್ರೀತಿ ಅಂದರೆ ಜಾಲತಾಣದಲ್ಲಿ ಪವನ್ ಕುಮಾರ್ ಅವರ ಒಂದು ಮೇಸೆಜ್ ಗೆ ಸ್ಪಂದಿಸಿ ಮರುದಿನವೇ 50 ಕಿಟ್ ನೀಡಿದ್ದಾರೆ. ರೂಪೇಶ್ ಶೆಟ್ಟಿ ಯವರ ಸಮಾಜ ಸೇವೆಗೆ ಜನರು ಭಾರಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ರೂಪೇಶ್ ಶೆಟ್ಟಿ ಹಾಗೂ ಅವರ ತಂಡಕ್ಕೆ ಧನ್ಯವಾದಗಳು.

ಈ ಸಂಧರ್ಭದಲ್ಲಿ ರೂಪೇಶ್ ಶೆಟ್ಟಿ ಮತ್ತು ತಂಡ,ಸಮಾಜ ಸೇವಕ ಪವನ್ ಕುಮಾರ್ ಶಿರ್ವ,ಕುರ್ಕಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಶೆಟ್ಟಿ, ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರಾದ ಆನಂದ ಕುಂಜಾರು,ಸುದರ್ಶನ್ ,ಮಂಜೇಶ ಹಾಗೂ ಮತ್ತಿತ್ತರು ಉಪಸ್ಥಿತರಿದ್ದರು.

Leave A Reply

Your email address will not be published.