ಕೊಂಬಾರು : ಸಿರಿಬಾಗಿಲು ಪ್ರದೇಶಕ್ಕೆ ಮತ್ತೆ ಲಗ್ಗೆ ಇಟ್ಟ ಕಾಡಾನೆ | ಅಪಾರ ಕೃಷಿ ಹಾನಿ

ಕಡಬ : ಕೊಂಬಾರು ಗ್ರಾಮ‌ ಪಂಚಾಯತ್ ವ್ಯಾಪ್ತಿಯ ಸಿರಿಬಾಗಿಲು ಗ್ರಾಮದ ಪಿಲಿಕಜೆ ಪ್ರದೇಶದಲ್ಲಿ ಗುರುವಾರ ರಾತ್ರಿ ಕಾಡಾನೆಯು ಕೃಷಿ ತೋಟಗಳಿಗೆ ದಾಳಿ ನಡೆಸಿದೆ.


ಒಂಟಿ ಸಲಗವೊಂದು ದಾಳಿ ನಡೆಸಿ ಬಾಳೆ, ಅಡಿಕೆ ಸಸಿ ಸಹಿತ ಇತರ ಕೃಷಿಯನ್ನು ಹಾಳು ಮಾಡಿದೆ. ಪಿ.ಸಿ.ಸುಂದರ ಗೌಡ ಸೇರಿದಂತೆ ಮೊದಲಾದವರ ಅಡಿಕೆ, ತೆಂಗು ಹಾಗೂ ಬಾಳೆ ಕೃಷಿಗೆ ಹಾನಿಯಾಗಿದೆ.

ಆನೆ ದಾಳಿ ನಡೆಸಿರುವುದು ಗಮನಕ್ಕೆ ಬಂದಂತೆ ಘಟನೆ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.

Leave A Reply

Your email address will not be published.