ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ) ಗುತ್ತಿಗಾರು ವತಿಯಿಂದ ಆಂಬ್ಯುಲೆನ್ಸ್ ಖರೀದಿ ವಿಚಾರಕ್ಕಾಗಿ ಸಮಾಲೋಚನ ಸಭೆ

ಗುತ್ತಿಗಾರು ಕೇಂದ್ರವಾಗಿರಿಸಿ ಹತ್ತು ಗ್ರಾಮ ವ್ಯಾಪ್ತಿಯ ಸಾರ್ವಜನಿಕರ ಶಾಶ್ವತ ಅನುಕೂಲಕ್ಕಾಗಿ ಟ್ರಸ್ಟ್ ಮುಖಾಂತರ ದೇಣಿಗೆ ಸಂಗ್ರಹಣೆ ಮಾಡಿ, ಆಂಬ್ಯುಲೆನ್ಸ್ ಖರೀದಿ ಮಾಡಿ ಮಿತ ದರದಲ್ಲಿ ಸೇವೆ ಒದಗಿಸುವ ಬಗ್ಗೆ ಸಭೆ ನಡೆಸಲಾಯಿತು. ಲಾಕ್ ಡೌನ್ ಮುಗಿದ ತಕ್ಷಣವೇ ಸದ್ರಿ ಯೋಜನೆಯನ್ನು ಅತೀ ಅಗತ್ಯವಾಗಿ ಅನುಷ್ಠಾನಗೊಳಿಸುವುದು ಮತ್ತು ದಾನಿಗಳು ಅಥವಾ ಸಂಸ್ಥೆಯೊಂದು ಆಂಬ್ಯುಲೆನ್ಸ್ ವಾಹನದ ಸಂಪೂರ್ಣ ವೆಚ್ಚ ಕೊಡುಗೆಯಾಗಿ ನೀಡಿದ್ದಲ್ಲಿ ಪಡೆದುಕೊಳ್ಳುವುದು, ಅದರ ನಿರ್ವಹಣೆ, ಮತ್ತು ಸೇವೆಯನ್ನು ಟ್ರಸ್ಟ್ ವತಿಯಿಂದ ಮಾಡುವುದು,ಈ ಕುರಿತು ಗಣ್ಯರ ಸಂಪರ್ಕ ಮಾಡುವುದು, ಎಂಬ ಒಮ್ಮತದ ತೀರ್ಮಾನಕ್ಕೆ ಬರಲಾಯಿತು.

ಸಭೆಯಲ್ಲಿ ಪಂಚಾಯತ್ ಸದಸ್ಯರು, ಸಹಕಾರ ಸಂಘದ ಪದಾಧಿಕಾರಿಗಳು, ವಕೀಲರು, ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಇದರ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು, ವರ್ತಕ ಸಂಘದ ಸದಸ್ಯರು, ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು, ಅಯ್ಯಪ್ಪ ಸೇವಾ ಸಮಿತಿ ಪದಾಧಿಕಾರಿಗಳು, ಹಾಗೂ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Leave A Reply

Your email address will not be published.