ಕಳ್ಳತನ ಮಾಡಿ ಪರಾರಿಯಾಗುವಾಗ ಅಪಘಾತ | ಇಬ್ಬರು ಪೊಲೀಸರ ವಶಕ್ಕೆ

ಕಳ್ಳತನ ಮಾಡಿ ಬೈಕ್‍ನಲ್ಲಿ ಪರಾರಿಯಾಗುವಾಗ ಅಪಘಾತಗೊಂಡು ಇಬ್ಬರು ಆರೋಪಿಗಳು ಬೆಂಗಳೂರು ನಗರದ ಪೀಣ್ಯ ಠಾಣಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಪೀಣ್ಯಾದ ಟಿವಿಎಸ್ ವೃತ್ತದ ಬಳಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಬೆದರಿಸಿ ಸುಲಿಗೆ ಮಾಡಿ ಬೈಕ್‍ನಲ್ಲಿ ವೇಗವಾಗಿ ಆರೋಪಿಗಳು ಪರಾರಿಯಾಗುತ್ತಿದ್ದರು ಎನ್ನಲಾಗಿದೆ.

ವ್ಯಕ್ತಿಯು ರಕ್ಷಣೆಗಾಗಿ ಕೂಗಿಕೊಂಡಿದ್ದರಿಂದ ಧಾವಿಸಿದ ಸ್ಥಳೀಯರು ಹಿಡಿಯಲು ಹೋದಾಗ ಗಡಿಬಿಡಿಯಲ್ಲಿ ಬೈಕ್ ಓಡಿಸಿ ಟೆಂಪೋ ಟ್ರಾವೆಲರ್‌ವೊಂದಕ್ಕೆ ಢಿಕ್ಕಿ ಹೊಡೆದಿದ್ದಾರೆ.

ಈ ವೇಳೆ ಇಬ್ಬರೂ ಬೈಕ್ ಸಮೇತ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಕೂಡಲೇ ಸ್ಥಳೀಯರು ಇಬ್ಬರನ್ನು ಹಿಡಿದು ಪೀಣ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಚಾರಣೆ ವೇಳೆ 10ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ ಎಂಬ ಮಾಹಿತಿ ದೊರೆತಿದೆ.

Leave A Reply

Your email address will not be published.