ಅಜೀಮ್ ಪ್ರೇಮ್ಜಿ ಲೋಕೋಪಕಾರಿ ಉಪಕ್ರಮ ಮತ್ತು ಗುಲ್ಬರ್ಗ ಧರ್ಮಕ್ಷೇತ್ರದ ಸಮಾಜಸೇವಾ ಅಭಿವೃದ್ಧಿ ಸಂಸ್ಥೆಗಳಿಂದ ಬಡಕುಟುಂಬಗಳಿಗೆ ಹಂಚಲು ಆಹಾರ ಧಾನ್ಯಗಳ ಸಿದ್ಧತೆ
ಅಜೀಮ್ ಪ್ರೇಮ್ಜಿ ಲೋಕೋಪಕಾರಿ ಉಪಕ್ರಮ (ಎಪಿಪಿಐ) ಮತ್ತು ಗುಲ್ಬರ್ಗ ಧರ್ಮಕ್ಷೇತ್ರದ ಸಮಾಜಸೇವಾ ಅಭಿವೃದ್ಧಿ ಸಂಸ್ಥೆಗಳಾದ ಸೇವಾ ಸಂಗಮ, ಕಲಬುರಗಿ ಹಾಗೂ ಆರ್ಬಿಟ್ ಸಂಸ್ಥೆ, ಬೀದರ್ ಇವರ ಜಂಟಿ ಆಶ್ರಯದಲ್ಲಿ ಒಂದು ಸಾವಿರ ರೂಪಾಯಿ ಮೌಲ್ಯದ ಆಹಾರಧಾನ್ಯದ ಕಿಟ್ ಗಳನ್ನು ಸುಮಾರು 17,500 ಬಡ ಕುಟುಂಬಗಳಿಗೆ ಹಂಚಲು ಸಿದ್ಧತೆ ನಡೆಸಲಾಯಿತು.
ಗುರುಗಳು, ಕನ್ಯಾ ಭಗಿನಿಯರು, ಭಕ್ತ ವಿಶ್ವಾಸಿಗಳು ಹಾಗೂ ನಲವತ್ತಕ್ಕಿಂತ ಅಧಿಕ ಸ್ವಯಂ ಸೇವಾ ಸಂಘಗಳು ಸ್ವಇಚ್ಛೆಯಿಂದ ಸೇವೆ ಸಲ್ಲಿಸಲು ಭಾಗಿಯಾಗಿಯಾದರು. ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳ ಸಂಯೋಗದೊಂದಿಗೆ ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳಲ್ಲಿ 200 ಕ್ಕಿಂತ ಹೆಚ್ಚು ಬಡ ಹಳ್ಳಿಗಳನ್ನು ಆರಿಸಿ ಆಹಾರ ಧಾನ್ಯಗಳನ್ನು ವಿತರಿಸಲು ಚಾಲನೆ ನೀಡಲಾಯಿತು.
ಡಾ.ನಾಗ್ನಾಥ್ ಹುನ್ಸೂರ್, ಸಿಎಂಒ
ಶ್ರೀ ಶಾಂಬುಲಿಂಗ್ ದೇಸಸಿ, ಪುರಸಾಬೆ ಮುಖ್ಯಸ್ಥ
ಗೀತಾ ರೆಡ್ಡಿ, ವೈದ್ಯಕೀಯ ಮುಖ್ಯಸ್ಥ,
ಫ್ರಾ. ಅನಿಲ್ ಕ್ರ್ಯಾಸ್ಟ್, ಕಕ್ಷೆಯ ನಿರ್ದೇಶಕರು
ಫ್ರಾ. ವಿಕ್ಟರ್ ವಾಸ್, ಸೇವಾ ಸಂಗಮ ನಿರ್ದೇಶಕರು ಹುಮ್ನಾಬಾದ್, ಬೀದರ್ ಜಿಲ್ಲೆಯಲ್ಲಿ ಮೊದಲ ಆಹಾರಧಾನ್ಯವನ್ನು ಬಡಜನರಿಗೆ ಕೊಡುವ ಮೂಲಕ ಚಾಲನೆ ನೀಡಿದರು.