ಬೆಳ್ತಂಗಡಿ | ಜನಸ್ನೇಹಿ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ. ದಿಢೀರ್ ವರ್ಗಾವಣೆ

ಬೆಳ್ತಂಗಡಿ : ಇಲ್ಲಿನ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಅವರನ್ನು ಧಿಡೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಸರ್ಕಾರ.

ಬೆಳ್ತಂಗಡಿ ತಾಲೂಕಿನಲ್ಲಿ ಮೂರುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿರುವ ನಿಷ್ಠಾವಂತ ಹಾಗೂ ಖಡಕ್ ಪೊಲೀಸ್ ಅಧಿಕಾರಿ ಸಂದೇಶ್ ಪಿಜಿ ವರ್ಗಾವಣೆ ಆಗಿದ್ದಾರೆ.

ಅವರನ್ನು ಮಂಗಳೂರಿನ ಬಜ್ಜೆ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ವೇಣೂರು,ಪುಂಜಾಲಕಟ್ಟೆ, ಧರ್ಮಸ್ಥಳ ಠಾಣೆಗಳ ಸರ್ಕಲ್ ಇನ್ಸೆಕ್ಟರ್ ಆಗಿದ್ದ ಸಂದೇಶ್ ಅವರು ಖಡಕ್ ಖಾಕಿ ಎಂದೇ ಹೆಸರುವಾಸಿಯಾಗಿದ್ದರು.

ಇತ್ತಿಚೆಗೆ ನಡೆದ ಉಜಿರೆಯ ಬಾಲಕನ ಅಪಹರಣ ಪ್ರಕರಣವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಚಾರಣಕ್ಕೆ ತೆರಳಿದ್ದ, ಕಲ್ಲು ಬಂಡೆಯ ಅಡಿ ಸಿಲುಕಿದ್ದ ಹುಡುಗನ ದೇಹವನ್ನು ಮೇಳೆತ್ತುವಲ್ಲಿ ವಿಶೇಷವಾಗಿ ಶ್ರಮಿಸಿದ್ದರು.

ಹೊಸ ಕನ್ನಡದೊಂದಿಗೆ ಮಾತನಾಡಿದ ಇವರು ಬೆಳ್ತಂಗಡಿಯಲ್ಲಿ ನಾನು ದೊಡ್ಡಮಟ್ಟದ ಜನರ ಪ್ರೀತಿಯನ್ನು ಗಳಿಸಿದ್ದೇನೆ ಎಂದು, ತಾಲೂಕಿನ ಜನರಿಗೆ ಕೃತಜ್ಞತೆಯನ್ನು ಅರ್ಪಿಸಿದ್ದಾರೆ.

Leave A Reply

Your email address will not be published.