ಅಮರ ಪಡ್ನೂರು | ವೃದ್ಧೆಯ ಮನೆಯ ಮೇಲ್ಛಾವಣಿಯನ್ನು ನಿರ್ಮಿಸಿ ಮಾನವೀಯತೆ ಮೆರೆದ ಶೇಣಿಯ ಯುವಕರು

ಅಮರಪಡ್ನೂರು ಗ್ರಾಮದ ಶೇಣಿಯ ಯುವಕರು ಅಶಕ್ತರಾದ ವೃದ್ಧೆಯೋರ್ವರಿಗೆ ಮನೆಯ ಛಾವಣಿಯನ್ನು ಸರಿಪಡಿಸುವುದರ ಮುಖಾಂತರ ಮಾನವೀಯತೆಯನ್ನು ಮೆರೆದಿದ್ದಾರೆ.

ಶೇಣಿಯ ವೃದ್ಧೆಯೊಬ್ಬರ ಮನೆಯ ಚಾವಣಿಯು ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ವಾಸಿಸಲು ಯೋಗ್ಯವಾಗದೆ ಬಹಳ ತೊಂದರೆಯನ್ನು ಅನುಭವಿಸುತ್ತಿದ್ದರು. ಇದನ್ನು ಮನಗಂಡ ಶೇಣಿಯ ಯುವಕರು ಒಟ್ಟು ಸೇರಿ ಇಂದು ಮನೆಯ ಮೇಲ್ಚಾವಣಿಯನ್ನು ಸರಿಪಡಿಸಿದರು.‌ ನೂತನವಾದ ಛಾವಣಿಯನ್ನು ನಿರ್ಮಿಸಿದರು.

ಈ ಕಾರ್ಯದಲ್ಲಿ ಶೇಣಿಯ ಹೆಚ್ಚಿನ ಯುವಕರು ಪಾಲ್ಗೊಂಡಿದ್ದರು.‌ ಶೇಣಿಯ ಯುವಕರು ತಮ್ಮ ಬಿಡುವಿನ ಸಂದರ್ಭದಲ್ಲಿ ಇಂತಹ ಕಾರ್ಯದಲ್ಲಿ ಪಾಲ್ಗೊಂಡದ್ದು ಮೆಚ್ಚುಗೆಯನ್ನು ಪಡೆದಿದೆ.

ವರದಿ: ಸೃಜನ್ ಶೇಣಿ

Leave A Reply

Your email address will not be published.