ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಹಲವರಿಗೆ ಹುಚ್ಚು ನಾಯಿಯೊಂದು ದಾಳಿ ಮಾಡಿ ಗಾಯಗೊಳಿಸಿದ ಘಟನೆ ಮೇ.21 ರಂದು ವರದಿಯಾಗಿದೆ.
ಶುಕ್ರವರ ಮುಂಜಾನೆ ಹುಚ್ಚು ನಾಯಿಯೊಂದು ಪಟ್ರಮೆ ಪ್ರದೇಶದಲ್ಲಿ ತಿರುಗಾಡುತ್ತಿದ್ದು, ಆ ಪರಿಸರದಲ್ಲಿರುವ ಕೆಲವು ಹಸುಗಳು, ಕೋಳಿ ಹಾಗೂ ನಾಯಿಗಳಿಗೆ ಕಚ್ಚಿ ಗಾಯಗೊಳಿಸಿದೆ.
ಪಟ್ರಮೆ ಗ್ರಾಮ ನಿವಾಸಿಗಳಾದ ಸುನಂದಾ ಕಲ್ಲಾಪು, ವಾಸಪ್ಪ ನಾಯ್ಕ ಕೇಶವ, ನೆಬಿಸಾ ಎಂಬವರಿಗೆ ಗಂಭೀರ ಗಾಯಗಳಾಗಿವೆ.
ಗಾಯಗೊಂಡ ಇವರುಗಳು ಸಮೀಪದ ಕ್ಲಿನಿಕ್ಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.