ಕಡ್ಲೆ ಗಂಟಲಲ್ಲಿ ಸಿಲುಕಿ ಮಗು ಸಾವು | ಮೊಮ್ಮಗನನ್ನು ಬದುಕಿಸಿ ಕೊಡುವಂತೆ ದೇವರ ಮುಂದೆ ಶವವಿಟ್ಟು ರೋಧಿಸಿದ ಅಮಾಯಕಿ ಅಜ್ಜಿ

ಮಗುವಿನ ಗಂಟಲಲ್ಲಿ ಕಡ್ಲೆ ಬೀಜ ಸಿಕ್ಕಿಕೊಂಡು ಉಸಿರುಗಟ್ಟಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಣಪತಿ ಗಲ್ಲಿಯಲ್ಲಿ ನಡೆದಿದೆ. ತನ್ನ ಮೊಮ್ಮಗು ಸಾವನ್ನಪ್ಪಿದ ತಕ್ಷಣ ದಿಕ್ಕೇ ತೋಚದ ಮಗುವಿನ ಅಜ್ಜಿ, ಇನ್ನೊಂದು ಪ್ರಯತ್ನವೆಂಬಂತೆ ಸಮೀಪದ ದೇವಸ್ಥಾನಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಿ ಬದುಕಿಸಿಕೊಡುವಂತೆ ಅಂಗಲಾಚಿದ ಮನ ಕಲುಕುವ ಘಟನೆ ನಡೆದಿದ್ದು ಅಲ್ಲಿ ಸೇರಿದ್ದ ಜನರ ಕಣ್ಣೀರು ತರಿಸಿತ್ತು.

ಯಲ್ಲಾಪುರದ ರಾಮನಾಥ ಆಚಾರಿ ಎಂಬ ಎರಡೂವರೆ ವರ್ಷದ ಸಾತ್ವಿಕ ನೆಲಗಡಲೆ ಬೀಜ ತಿನ್ನುತ್ತಿದ್ದ. ಆ ವೇಳೆ ಮಗುವಿನ ಗಂಟಲಲ್ಲಿ ಬೀಜ ಸಿಕ್ಕಿಕೊಂಡು ಮಗು ಒದ್ದಾಡಿ ಮೃತಪಟ್ಟಿದೆ ಎಂದು ತಿಳಿಸುತ್ತಿದ್ದಂತೆ ತಾಯಿ ಮತ್ತು ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಆಗ ಸಾತ್ವಿಕ್ ನ ಅಜ್ಜಿ ಮೊಮ್ಮಗನ ಮೃತದೇಹವನ್ನು ಸಮೀಪದಲ್ಲಿರುವ ಗಣಪತಿ ಮಂದಿರಕ್ಕೆ ತೆಗೆದುಕೊಂಡು ಹೋದರು. ಗರ್ಭಗುಡಿಯೆದುರು ಮಲಗಿಸಿದ ಅಜ್ಜಿ, ದೇವಸ್ಥಾನದ ಘಂಟೆಯನ್ನು ಬಾರಿಸುತ್ತಾ, ಮಗುವನ್ನು ಬದುಕಿಸು ಎಂದು ಮೊರೆ ಹೋದರು. ಈ ಸನ್ನಿವೇಶಗಳನ್ನು ಅಸಹಾಯಕರಾಗಿ ನೋಡುತ್ತಿದ್ದ ಜನರೆಲ್ಲ ಭಾವುಕರಾಗಿ ಅವರ ಕಣ್ಣುಗಳಲ್ಲಿ. ನಂತರ ಕುಟುಂಬದವರು ಅಜ್ಜಿಯನ್ನು ಸಮಾಧಾನ ಪಡಿಸಿ ಅಲ್ಲಿಂದ ಕರೆದುಕೊಂಡು ಹೋದರು.

Leave A Reply

Your email address will not be published.