ಕೋವಿಡ್‌ಗೆ ಸವಣೂರಿನ ಇಬ್ಬರು ಮೃತ್ಯು | ಗ್ರಾಮಾಂತರಕ್ಕೂ ವಿಸ್ತಾರಗೊಳ್ಳುತ್ತಿದೆ ಕ್ರೂರಿ ಕೊರೊನಾ ಕಬಂಧಬಾಹು

ಪುತ್ತೂರು : ಕಡಬ ತಾಲೂಕಿನ ಸವಣೂರಿನಲ್ಲಿ ಇಬ್ಬರು ಮಹಮಾರಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಸವಣೂರು ಗ್ರಾಮದ ಮುಟ್ರ ನಿವಾಸಿ ಮಹಿಳೆಯೊಬ್ಬರು ಮಂಗಳವಾರ ಬಲಿಯಾಗಿದ್ದಾರೆ.

ಇಂದು ಮೇ.19 ರಂದು ಸವಣೂರು ಗ್ರಾಮದ ಮಾಂತೂರು ನಿವಾಸಿ ಉಸ್ಮಾನ್ ಅವರು ಕೋವಿಡ್ ನಿಂದಾಗಿ ಇಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು.

ಎರಡು ದಿನಗಳ ಹಿಂದೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ನಂತರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತರಾದರು.

ಸವಣೂರಿನಲ್ಲಿ ಮುಟ್ರ ಎಂಬಲ್ಲಿ ಕಂಟೈನ್‌ಮೆಂಟ್ ಝೋನ್ ಮಾಡಲಾಗಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆಯವರು,ಗ್ರಾ.ಪಂ.ಕೋವಿಡ್ ಕಾರ್ಯಪಡೆ ನೀಡಿದೆ. ಗ್ರಾ.ಪಂ.ನಿಂದ ಈ ಮನೆಗೆ ಕಿಟ್ ನೀಡಲಾಗಿದೆ.

Leave A Reply

Your email address will not be published.