ಬೆಳ್ತಂಗಡಿ | ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿನಿ, ಧರ್ಮಸ್ಥಳ ಮೂಲದ ದಿವ್ಯಾ ಕೆಂಗುಡೇಲು ವಿಧಿವಶ

ಮೆದುಳಿನಲ್ಲಿಿ ಬೆಳೆದ ಗೆಡ್ಡೆಯ ಪರಿಣಾಮವಾಗಿ ದೀರ್ಘಕಾಲದ ಬಳಲಿಕೆಯಿಂದ ಯುವತಿಯೊಬ್ಬಳು ಅಸುನೀಗಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಸಾವನ್ನಪ್ಪಿದ ಯುವತಿ ಧರ್ಮಸ್ಥಳ ಗ್ರಾಮದ ನಾರ್ಯ ಮೂಲದ ದಿವ್ಯ ಎಂದು ತಿಳಿದುಬಂದಿದೆ. ಇವರು ಉಜಿರೆ ಎಸ್ ಡಿ ಯಂ ಕಾಲೇಜಿನಲ್ಲಿ ಎಂಕಾಂ ಪದವೀಧರೆಯಾಗಿದ್ದು, ಕೊಕ್ಕಡದ ಕೆಂಗುಡೇಲು ಶಿವಪ್ರಸಾದ್ ಗೌಡ ಎಂಬವರನ್ನ ವಿವಾಹವಾಗಿ, ಪ್ರಸ್ತುತ ಅಲ್ಲಿಯೇ ನೆಲೆಸಿದ್ದರು.

ಇವರಿಗೆ ಒಂದೂವರೆ ವರ್ಷದ ಗಂಡು ಮಗುವಿದ್ದು, ಗಂಡ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಕೆಯೂ ತಮ್ಮ ಕುಟುಂಬದ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದು ಅಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದರು. ಆಕೆಗೆ ಅನಾರೋಗ್ಯ ಬಾಧಿಸಿದ ಹಿನ್ನೆಲೆಯಲ್ಲಿ ಆಕೆ ಊರಿಗೆ ಆರೈಕೆಗೆಂದು ಮರಳಿದ್ದಳು.

ಕಳೆದ ಒಂದು ವರ್ಷದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರುು ಎಲ್ಲಾ ರೀತಿಯ ಚಿಕಿತ್ಸೆ ಪಡೆದುಕೊಂಡಿದ್ದರು. ಕೊನೆಗೆ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೂ ಸುದೀರ್ಘ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅಲೋಪತಿ ವೈದ್ಯ ಪದ್ಧತಿಯ ಚಿಕಿತ್ಸೆ ಫಲಕಾರಿಯಾಗದೆ ನಂತರ ಆಕೆ ಕೇರಳದ ಆಯುರ್ವೇದಿಯ ಚಿಕಿತ್ಸೆ ಪಡೆಯುತ್ತಿದ್ದರು. ಈಗ ದೀರ್ಘ ಯಾತನಾದಾಯಕ ಚಿಕಿತ್ಸಾ ಜೀವನ ನಡೆಸಿ ನಿನ್ನೆ ರಾತ್ರಿ ಆಕೆ ಇಹಲೋಕ ತ್ಯಜಿಸಿದ್ದಾರೆ.

Leave A Reply

Your email address will not be published.