ನದಿಯಲ್ಲಿ ಮುಳುಗಿ ಬಾಲಕ ಮೃತ್ಯು | ಗೆಳೆಯರೊಂದಿಗೆ ನದಿಯಲ್ಲಿ ಆಡುತ್ತಿದ್ದಾಗ ನಡೆಯಿತು ದುರ್ಘಟನೆ

ಮಂಗಳೂರು :ಗೆಳೆಯರ ಜೊತೆಗೂಡಿ ನದಿ ಸಮೀಪ ಆಟವಾಡುತ್ತಿದ್ದ ಈಜಲು ನದಿಗೆ ಇಳಿದಿದ್ದ ಬಾಲಕನೋರ್ವ ಫಲ್ಗುಣಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಲ್ಲೂರು ಸಮೀಪದ ಉದ್ದಬೆಟ್ಟು ಎಂಬಲ್ಲಿ ರವಿವಾರ ಸಂಜೆ ನಡೆದಿದೆ.

ಉದ್ದಬೆಟ್ಟುವಿನ ಅಬ್ದುಲ್ ಖಾದರ್‌ ಎಂಬವರ ಪುತ್ರ ಮನ್ಸೂರ್ (17) ಮೃತ ಬಾಲಕ.

ಗೆಳೆಯರ ಜೊತೆಗೂಡಿ ನದಿ ಸಮೀಪ ಆಟವಾಡುತ್ತಿದ್ದ ಈತ ಈಜಲು ನದಿಗೆ ಇಳಿದಿದ್ದ ಎನ್ನಲಾಗಿದ್ದು, ಈ ಸಂದರ್ಭ ನದಿಯ ಸುಳಿಗೆ ಸಿಲುಕಿ ನೀರಲ್ಲಿ ಮುಳುಗಿದ್ದು, ತಕ್ಷಣ ಅಲ್ಲೇ ಇದ್ದ ಇತರರು ನದಿಗೆ ಹಾರಿ ಮನ್ಸೂರ್‌ನನ್ನು ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಪೊಲೀಸರು ತೆರಳಿದ್ದು, ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.