ಬೆಳ್ತಂಗಡಿ | ಕೋರೋನಾ ವ್ಯಾಧಿಗೆ ಮತ್ತೊಂದು ಬಲಿ !

ಬೆಳ್ತಂಗಡಿ ತಾಲೂಕಿನಲ್ಲಿ ಕೋರೋನಾ ವ್ಯಾಧಿಗೆ ಮತ್ತೊಂದು ಬಲಿಯಾಗಿದೆ.

ಕಾರ್ಕಳದ ಮಿಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾ ಶಿಕ್ಷಕರಾಗಿದ್ದ ಸುಧೀರ್ ಎಂಬವರು ಕೋರೋನಾದಿಂದ ಮೃತಪಟ್ಟಿದ್ದಾರೆ.

ಸುಧೀರ್ ಅವರು ಶಿರ್ಲಾಲುವಿನ ಪುದ್ದರ್ ಬೈಲ್ ನಿವಾಸಿಯಾಗಿದ್ದು ಚಿಕ್ಕ ಪ್ರಾಯದಲ್ಲೇ ಕೋರೋನಾಗೆ ಬಲಿಯಾಗಿದ್ದಾರೆ.

ಅವರು ಕಳೆದ 15 ಕ್ಕೂ ಹೆಚ್ಚು ದಿನಗಳಿಂದ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಆತ ಅಸುನೀಗಿದ್ದಾರೆ.
ಅವರು ಪತಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Leave A Reply

Your email address will not be published.