ಕುಡಿದು ಬಂದ ತಮ್ಮನ ಕ್ಯಾತೆ | ಸಹೋದರರೊಳಗೆ ಕತ್ತಿ ಕಾಳಗ, ತಮ್ಮನ ಏಟಿಗೆ ಅಣ್ಣ ಗಂಭೀರ

ಸಹೋದರರ ನಡುವೆ ಜಗಳ ನಡೆದು ಅಣ್ಣನಿಗೆ ತಮ್ಮ ಕತ್ತಿಯಿಂದ ಕಡಿದು ಘಟನೆ ಕಡಬ ತಾಲೂಕಿನ ಮೂಜೂರು ಎಂಬಲ್ಲಿ ಇಂದು ಸಂಜೆ ಸಂಭವಿಸಿದೆ.

ಗಾಯಗೊಂಡ ವ್ಯಕ್ತಿಯನ್ನು ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ಸಮೀಪದ ಮುಂಡಡ್ಕ ನಿವಾಸಿ ಧ್ರುವ ಕುಮಾರ್(35) ಎಂದು ಗುರುತಿಸಲಾಗಿದೆ.

ಈ ಹಿಂದೆ, ಇದೀಗ ಗಾಯಗೊಂಡವರ ತಮ್ಮ ಬಾರಿನಲ್ಲಿ ಕುಡಿದು ಗಲಾಟೆ ಮಾಡಿಕೊಂಡಿದ್ದ. ಆ ಗಲಾಟೆಯ ವಿಚಾರ ಊರಿನಲ್ಲಿ ಎಲ್ಲ ಕಡೆ ಪ್ರಚಾರ ಆಗಿತ್ತು. ಅಣ್ಣನೇ ಹೀಗೆ ಪ್ರಚಾರ ಮಾಡಿದ್ದಾನೆ ಅಂದುಕೊಂಡ ತಮ್ಮ ಮನೆಗೆ ಬಂದು ಕ್ಯಾತೆ ತೆಗೆದಿದ್ದಾನೆ. ನಂತರ ಜಗಳ ದೊಡ್ಡದಾಗಿ ಇಂದು ಸಂಜೆ ಜಗಳವುಂಟಾಗಿ ತಮ್ಮ ಪ್ರೀತಮ್ ಎಂಬಾತ ಅಣ್ಣನಿಗೆ ಕತ್ತಿಯಿಂದ ಕಡಿದಿರುವುದಾಗಿ ತಿಳಿದುಬಂದಿದೆ.

ಗಂಭೀರ ಗಾಯಗೊಂಡ ಅಣ್ಣನನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿದೆ.

Leave A Reply

Your email address will not be published.