ಕರ್ನಾಟಕದ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸಹೋದರ ದುಂಡಪ್ಪ ಕೊರೋನಾಗೆ ಬಲಿಯಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಸವದಿ ಅವರ ಅಣ್ಣನ ಮಗ ವಿನೋದ್ ಕೂಡ ಕೋವಿಡ್ ಗೆ ಬಲಿಯಾಗಿದ್ದರು.
ಅಥಣಿ ತಾಲೂಕಿನಲ್ಲಿ ಕೋವಿಡ್ ಸೆಂಟರ್ ಉದ್ಘಾಟನೆಗೆ ಆಗಮಿಸಿದ್ದ ಲಕ್ಷ್ಮಣ್ ಸವದಿ ಈ ವಿಷಯ ಹಂಚಿಕೊಂಡಿದ್ದು ಇಂತಹ ಸ್ಥಿತಿ ಯಾರಿಗೂ ಬರಬಾರದು ಎಂದು ಮರುಗಿದ್ದಾರೆ.